ಮೇವು ಬೇಕಾಗಿರುವ ರೈತರು ಅನಿವಾರ್ಯವಾಗಿ ಹೊರ ತಾಲ್ಲೂಕು ಮತ್ತು ಜಿಲ್ಲೆಗಳಿಗೆ ಹೋಗಿ ದುಬಾರಿ ಹಣವನ್ನು ತೆತ್ತು ಮೇವು ತರುತ್ತಿದ್ದಾರೆ.
ತಾಲ್ಲೂಕಿನಲ್ಲಿ ನೀರಾವರಿ ಪ್ರದೇಶ ಹೆಚ್ಚಾದಂತೆ ಅಡಿಕೆ, ತೆಂಗು ಬೆಳೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ರೈತರು ರಾಗಿ, ಜೋಳ, ಹುರುಳಿ ಬೆಳೆಯುವ ಕಡೆ ಗಮನ ಕಡಿಮೆಯಾಗುತ್ತಿರುವುದು ಮೇವು ಕೊರತೆಯಾಗಲು ಮುಖ್ಯ ಕಾರಣ ಎಂದು ರೈತ ಜಯದೇವಯ್ಯ ಅಭಿಪ್ರಾಯಪಡುತ್ತಾರೆ.