‘ಆ ಭಾಗದಲ್ಲಿ ಸಾಂಬಾರ್ ಪದಾರ್ಥ ಬಜೆ,ಅರಿಷಿಣ, ಶುಂಠಿ ಬೆಳೆಗಳನ್ನು ಹೆಚ್ಚು ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಅಲ್ಲಿನ ಬೆಳೆಗಾರರು ಕೊಯಮತ್ತೂರಿಗೆ ಹೋಗಿ ಶೀತಲಗೃಹಗಳಲ್ಲಿ (ಕೋಲ್ಡ್ ಸ್ಟೋರೇಜ್) ಉತ್ಪನ್ನಗಳನ್ನು ಇಡುತ್ತಿದ್ದಾರೆ. ಫುಡ್ ಪಾರ್ಕ್ ಸ್ಥಾಪನೆ ಮಾಡಲು ಅಗತ್ಯ ಅನುಕೂಲಗಳನ್ನು ಒದಗಿಸಲಾಗುವುದು. ನೀರು, ವಿದ್ಯುತ್ ಸೇರಿ ಎಲ್ಲ ರೀತಿಯ ಮೂಲಸೌಕರ್ಯ ಒದಗಿಸಿಕೊಡಲಾಗುವುದು’ ಎಂದು ಸಚಿವರು, ಫುಡ್ ಪಾರ್ಕ್ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜಯ್ ಮಾಕನ್ಗೆ ಮನವರಿಕೆ ಮಾಡಿದರು.