ಎಸ್ಐಟಿ ಬಡಾವಣೆ, ಕೃಷ್ಣ ನಗರ, ಬನಶಂಕರಿ, ಕುವೆಂಪು ನಗರ, ವಿದ್ಯಾನಗರ ಹೀಗೆ ಬಹಳಷ್ಟು ಕಡೆಗಳಲ್ಲಿ ರಸ್ತೆ ಬದಿಯಲ್ಲಿ ರಾತ್ರೋರಾತ್ರಿ ಕಸವನ್ನು ಜನರು ರಸ್ತೆ ಬದಿ, ಚರಂಡಿ, ಖಾಲಿ ನಿವೇಶನ, ಮನೆಗಳ ಎದುರು ಎಸೆಯುತ್ತಿದ್ದಾರೆ. ಚರಂಡಿಗಳಿಗೆ ಕಸ ಬೀಳುತ್ತಿರುವುದರಿಂದ ಕೊಳಚೆ ಸರಾಗವಾಗಿ ಹರಿಯಲು ತಡೆಯಾಗಿದೆ. ಕಸ ಎಸೆಯುವ ಪ್ರಕ್ರಿಯೆ ರಾತ್ರಿ ಮತ್ತು ಬೆಳಗಿನ ಜಾವ ಹೆಚ್ಚಿದೆ.