ಗುಬ್ಬಿ: ಎಚ್ಎಎಲ್ ಉದ್ಘಾಟನಾ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ತೆರಳುವ ವೇಳೆ ತಾಲ್ಲೂಕಿನ ತ್ಯಾಗಟೂರು ಗೇಟ್ ಬಳಿ ಸೋಮವಾರ ರಾತ್ರಿ ಬೈಕ್ಗೆ ಲಾರಿ ಡಿಕ್ಕಿಹೊಡೆದು ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ದೀಪಕ್ (20), ಯಶಸ್ವಿನಿ (20) ಮೃತರು.
ತಾಲ್ಲೂಕಿನ ಏರೂರು ಬಳಿಯ ಚನ್ನಬಸವೇಶ್ವರ ಎಂಜಿನಿಯರಿಂಗ್ (ಸಿಐಟಿ) ಕಾಲೇಜಿನಲ್ಲಿ ಓದುತ್ತಿದ್ದರು. ಎಚ್ಎಎಲ್ನಿಂದ ಬಸ್ ಮೂಲಕ ಕಾಲೇಜಿಗೆ ಹೋಗಿ, ಅಲ್ಲಿಂದ ಬೈಕ್ನಲ್ಲಿ ತಮ್ಮ ಊರಿಗೆ ಹೋಗುವಾಗ ಅಪಘಾತ ಸಂಭವಿಸಿದೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕು ಹಾಲುಗೊಣ ಗ್ರಾಮದ ಯಶಸ್ವಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತುರುವೇಕೆರೆ ತಾಲ್ಲೂಕಿನ ಹುಳ್ಳೇಕೆರೆ ನಿವಾಸಿ ದೀಪಕ್ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾರೆ.