<p><strong>ಗುಬ್ಬಿ:</strong> ತಾಲ್ಲೂಕಿನಾದ್ಯಂತ ಭಾನುವಾರ ಶಿವರಾತ್ರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.</p>.<p>ಶಿವಲಿಂಗಕ್ಕೆ ವಿಶೇಷ ಅಭಿಷೇಕ, ಅರ್ಚನೆ ನಡೆಯಿತು. ಅಭಿಷೇಕದ ನಂತರ ಬಿಲ್ವಪತ್ರೆ, ಮುತ್ತುಗದ ಹೂಗಳಿಂದ ಶಿವಲಿಂಗನವನ್ನು ಅಲಂಕಾರ ಮಾಡಲಾಗಿತ್ತು.</p>.<p>ನಿಟ್ಟೂರಿನ ಕಲ್ಲೇಶ್ವರ ಸ್ವಾಮಿ, ಗುಹೇಶ್ವರ ಸ್ವಾಮಿ, ಹೊಸಕೆರೆ ಚಂದ್ರಮೌಳೇಶ್ವರ ಹಾಗೂ ದೊಡ್ಡ ಈಶ್ವರ ದೇವಾಲಯ, ಚೇಳೂರಿನ ದುಷ್ಟೇಶ್ವರ ದೇವಾಲಯ, ಸಿಎಸ್ ಪುರ ಮತ್ತು ಕಡಬದ ಈಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ರಥೋತ್ಸವ ನಡೆಯಿತು.</p>.<p>ಬೆಳಿಗ್ಗೆಯಿಂದಲೇ ಜನರು ಮುತ್ತುಗದ ಹೂವು, ಬಿಲ್ವಪತ್ರೆ, ಬನ್ನಿಪತ್ರೆ, ತುಂಬೆ ಹೂವು, ಗರಿಕೆ ತಂದು ಮನೆಗಳಲ್ಲಿ ಪೂಜಿಸಿದ ನಂತರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.</p>.<p>ಚನ್ನಬಸವೇಶ್ವರ ಮೂರ್ತಿಗೆ ಬೆಳಗಿನ ಅಭಿಷೇಕದ ನಂತರ ರುದ್ರಾಕ್ಷಿ, ವಿಭೂತಿ, ಸ್ಪಟಿಕ, ಮುತ್ತುಗ, ಬಿಲ್ವಪತ್ರೆ, ತುಂಬೆ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ನೂರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.</p>.<p>ಹಲವೆಡೆ ರುದ್ರಾಕ್ಷಿ ನೀಡಲಾಯಿತು. ರಾತ್ರಿ ಜಾಗರಣೆ ಅಂಗವಾಗಿ ಶಿವಾಲಯಗಳಲ್ಲಿ ಭಜನಾ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯಿತು.</p>
<p><strong>ಗುಬ್ಬಿ:</strong> ತಾಲ್ಲೂಕಿನಾದ್ಯಂತ ಭಾನುವಾರ ಶಿವರಾತ್ರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.</p>.<p>ಶಿವಲಿಂಗಕ್ಕೆ ವಿಶೇಷ ಅಭಿಷೇಕ, ಅರ್ಚನೆ ನಡೆಯಿತು. ಅಭಿಷೇಕದ ನಂತರ ಬಿಲ್ವಪತ್ರೆ, ಮುತ್ತುಗದ ಹೂಗಳಿಂದ ಶಿವಲಿಂಗನವನ್ನು ಅಲಂಕಾರ ಮಾಡಲಾಗಿತ್ತು.</p>.<p>ನಿಟ್ಟೂರಿನ ಕಲ್ಲೇಶ್ವರ ಸ್ವಾಮಿ, ಗುಹೇಶ್ವರ ಸ್ವಾಮಿ, ಹೊಸಕೆರೆ ಚಂದ್ರಮೌಳೇಶ್ವರ ಹಾಗೂ ದೊಡ್ಡ ಈಶ್ವರ ದೇವಾಲಯ, ಚೇಳೂರಿನ ದುಷ್ಟೇಶ್ವರ ದೇವಾಲಯ, ಸಿಎಸ್ ಪುರ ಮತ್ತು ಕಡಬದ ಈಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ರಥೋತ್ಸವ ನಡೆಯಿತು.</p>.<p>ಬೆಳಿಗ್ಗೆಯಿಂದಲೇ ಜನರು ಮುತ್ತುಗದ ಹೂವು, ಬಿಲ್ವಪತ್ರೆ, ಬನ್ನಿಪತ್ರೆ, ತುಂಬೆ ಹೂವು, ಗರಿಕೆ ತಂದು ಮನೆಗಳಲ್ಲಿ ಪೂಜಿಸಿದ ನಂತರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.</p>.<p>ಚನ್ನಬಸವೇಶ್ವರ ಮೂರ್ತಿಗೆ ಬೆಳಗಿನ ಅಭಿಷೇಕದ ನಂತರ ರುದ್ರಾಕ್ಷಿ, ವಿಭೂತಿ, ಸ್ಪಟಿಕ, ಮುತ್ತುಗ, ಬಿಲ್ವಪತ್ರೆ, ತುಂಬೆ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ನೂರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.</p>.<p>ಹಲವೆಡೆ ರುದ್ರಾಕ್ಷಿ ನೀಡಲಾಯಿತು. ರಾತ್ರಿ ಜಾಗರಣೆ ಅಂಗವಾಗಿ ಶಿವಾಲಯಗಳಲ್ಲಿ ಭಜನಾ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯಿತು.</p>