<p><strong>ಗುಬ್ಬಿ:</strong> ತಾಲ್ಲೂಕಿನಾದ್ಯಂತ ಭಾನುವಾರ ಶಿವರಾತ್ರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.</p>.<p>ಶಿವಲಿಂಗಕ್ಕೆ ವಿಶೇಷ ಅಭಿಷೇಕ, ಅರ್ಚನೆ ನಡೆಯಿತು. ಅಭಿಷೇಕದ ನಂತರ ಬಿಲ್ವಪತ್ರೆ, ಮುತ್ತುಗದ ಹೂಗಳಿಂದ ಶಿವಲಿಂಗನವನ್ನು ಅಲಂಕಾರ ಮಾಡಲಾಗಿತ್ತು.</p>.<p>ನಿಟ್ಟೂರಿನ ಕಲ್ಲೇಶ್ವರ ಸ್ವಾಮಿ, ಗುಹೇಶ್ವರ ಸ್ವಾಮಿ, ಹೊಸಕೆರೆ ಚಂದ್ರಮೌಳೇಶ್ವರ ಹಾಗೂ ದೊಡ್ಡ ಈಶ್ವರ ದೇವಾಲಯ, ಚೇಳೂರಿನ ದುಷ್ಟೇಶ್ವರ ದೇವಾಲಯ, ಸಿಎಸ್ ಪುರ ಮತ್ತು ಕಡಬದ ಈಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ರಥೋತ್ಸವ ನಡೆಯಿತು.</p>.<p>ಬೆಳಿಗ್ಗೆಯಿಂದಲೇ ಜನರು ಮುತ್ತುಗದ ಹೂವು, ಬಿಲ್ವಪತ್ರೆ, ಬನ್ನಿಪತ್ರೆ, ತುಂಬೆ ಹೂವು, ಗರಿಕೆ ತಂದು ಮನೆಗಳಲ್ಲಿ ಪೂಜಿಸಿದ ನಂತರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.</p>.<p>ಚನ್ನಬಸವೇಶ್ವರ ಮೂರ್ತಿಗೆ ಬೆಳಗಿನ ಅಭಿಷೇಕದ ನಂತರ ರುದ್ರಾಕ್ಷಿ, ವಿಭೂತಿ, ಸ್ಪಟಿಕ, ಮುತ್ತುಗ, ಬಿಲ್ವಪತ್ರೆ, ತುಂಬೆ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ನೂರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.</p>.<p>ಹಲವೆಡೆ ರುದ್ರಾಕ್ಷಿ ನೀಡಲಾಯಿತು. ರಾತ್ರಿ ಜಾಗರಣೆ ಅಂಗವಾಗಿ ಶಿವಾಲಯಗಳಲ್ಲಿ ಭಜನಾ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಬ್ಬಿ:</strong> ತಾಲ್ಲೂಕಿನಾದ್ಯಂತ ಭಾನುವಾರ ಶಿವರಾತ್ರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.</p>.<p>ಶಿವಲಿಂಗಕ್ಕೆ ವಿಶೇಷ ಅಭಿಷೇಕ, ಅರ್ಚನೆ ನಡೆಯಿತು. ಅಭಿಷೇಕದ ನಂತರ ಬಿಲ್ವಪತ್ರೆ, ಮುತ್ತುಗದ ಹೂಗಳಿಂದ ಶಿವಲಿಂಗನವನ್ನು ಅಲಂಕಾರ ಮಾಡಲಾಗಿತ್ತು.</p>.<p>ನಿಟ್ಟೂರಿನ ಕಲ್ಲೇಶ್ವರ ಸ್ವಾಮಿ, ಗುಹೇಶ್ವರ ಸ್ವಾಮಿ, ಹೊಸಕೆರೆ ಚಂದ್ರಮೌಳೇಶ್ವರ ಹಾಗೂ ದೊಡ್ಡ ಈಶ್ವರ ದೇವಾಲಯ, ಚೇಳೂರಿನ ದುಷ್ಟೇಶ್ವರ ದೇವಾಲಯ, ಸಿಎಸ್ ಪುರ ಮತ್ತು ಕಡಬದ ಈಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ರಥೋತ್ಸವ ನಡೆಯಿತು.</p>.<p>ಬೆಳಿಗ್ಗೆಯಿಂದಲೇ ಜನರು ಮುತ್ತುಗದ ಹೂವು, ಬಿಲ್ವಪತ್ರೆ, ಬನ್ನಿಪತ್ರೆ, ತುಂಬೆ ಹೂವು, ಗರಿಕೆ ತಂದು ಮನೆಗಳಲ್ಲಿ ಪೂಜಿಸಿದ ನಂತರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.</p>.<p>ಚನ್ನಬಸವೇಶ್ವರ ಮೂರ್ತಿಗೆ ಬೆಳಗಿನ ಅಭಿಷೇಕದ ನಂತರ ರುದ್ರಾಕ್ಷಿ, ವಿಭೂತಿ, ಸ್ಪಟಿಕ, ಮುತ್ತುಗ, ಬಿಲ್ವಪತ್ರೆ, ತುಂಬೆ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ನೂರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.</p>.<p>ಹಲವೆಡೆ ರುದ್ರಾಕ್ಷಿ ನೀಡಲಾಯಿತು. ರಾತ್ರಿ ಜಾಗರಣೆ ಅಂಗವಾಗಿ ಶಿವಾಲಯಗಳಲ್ಲಿ ಭಜನಾ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>