ಮಹಾರಾಷ್ಟ್ರದಿಂದ ಬೆಂಗಳೂರಿಗೆ ರವಿಶಂಕರ್ ಗುರೂಜಿ ಅವರ ಕಾರ್ಯಕ್ರಮಕ್ಕೆ ಹೋಗುತ್ತಿದ್ದ ಸುಮಾರು 60ಕ್ಕೂ ಹೆಚ್ಚು ಮಂದಿ ಅರಸು ಹೋಟೆಲ್ನಲ್ಲಿ ತಿಂಡಿ ತಿನ್ನಲು ಬಂದಿದ್ದರು. ಮಕ್ಕಳು, ಯುವಕರು ಸೇರಿದಂತೆ ಕೆಲವರು ತಿಂಡಿ ತಿಂದು ಬಸ್ಸಿನ ಕಡೆ ಹೊರಡುತ್ತಿದ್ದರು. ಮತ್ತೆ ಕೆಲವರು ಉಪಹಾರ ಸೇವಿಸುತ್ತಿದ್ದರು. ಅಷ್ಟರಲ್ಲಿ ರಮೇಶ್ ಎಂಬುವರಿಗೆ ತಾವು ತಿನ್ನುತ್ತಿದ್ದ ಉಪಹಾರದಲ್ಲಿ ಹಲ್ಲಿಯೊಂದು ಕಂಡಿದೆ.