‘ತೊರೆಯ ಪ್ರದೇಶವನ್ನು ಮುಚ್ಚಿ, ಕುರುಹು ಸಹ ಇಲ್ಲದಂತೆ ಮಾಡಿ, ಕಬ್ಬಿಣದ ತ್ಯಾಜ್ಯ ಘಟಕ ನಿರ್ಮಿಸಲಾಗಿದೆ. ಕೆರೆ ಸೇರಿದಂತೆ ಕಟ್ಟೆಯ ನೀರನ್ನು ಕುಲುಷಿತಗೊಳಿಸುತ್ತಿರುವ ಘಟಕದ ಮಾಲೀಕರ ಮೇಲೆ ಕಾನೂನು ಕ್ರಮ ತೆಗೆದುಕೊಂಡು ಮುಚ್ಚಿಸಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಮಂಜುನಾಥ್ ಮನವಿ ಮಾಡಿದ್ದಾರೆ.