<p><strong>ತುಮಕೂರು:</strong> 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ ಆರಂಭವಾಗಿದೆ. ನಗರದ ಅಮಾನಿಕೆರೆ ಗಾಜಿನಮನೆಯಲ್ಲಿ ಡಿ. 29 ಹಾಗೂ 30ರಂದು ವಿವಿಧ ವಿಚಾರ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.</p><p>ಗಾಜಿನಮನೆಯಲ್ಲಿ ವೇದಿಕೆ, ಆಸನಗಳ ವ್ಯವಸ್ಥೆ ಸೇರಿ ಅಗತ್ಯ ಪೂರ್ವ ತಯಾರಿ ಕೆಲಸಗಳು ಭರದಿಂದ ಸಾಗಿವೆ. ಮಕ್ಕಳ ಗೋಷ್ಠಿ, ಸಮ್ಮೇಳನಾಧ್ಯಕ್ಷರ ಜತೆ ಸಂವಾದ, ತುಮಕೂರು ನೆಲದ ಧಾರ್ಮಿಕ ಪರಂಪರೆ, ಕವಿಗೋಷ್ಠಿ ಒಳಗೊಂಡಂತೆ ಒಟ್ಟು 7 ಗೋಷ್ಠಿಗಳು ನಡೆಯಲಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ.</p><p>‘ಸಾಹಿತಿ ಕರೀಗೌಡ ಬೀಚನಹಳ್ಳಿ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಶಾಸಕ ಟಿ.ಬಿ.ಜಯಚಂದ್ರ, ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಮೊದಲಾದವರು ಭಾಗವಹಿಸಲಿದ್ದಾರೆ’ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಇಲ್ಲಿ ಶನಿವಾರ ಹೇಳಿದರು.</p><p>29ರಂದು ಮಧ್ಯಾಹ್ನ 2 ಗಂಟೆಗೆ ‘ದಲಿತ ಸಾಹಿತ್ಯ ಐವತ್ತು– ಬಂಡಾಯ ನಲವತ್ತಾರು’ ಗೋಷ್ಠಿ ಏರ್ಪಡಿಸಲಾಗಿದೆ. ಮುಖಂಡ ಕೊಟ್ಟಶಂಕರ್, ನಿವೃತ್ತ ಪ್ರಾಧ್ಯಾಪಕಿ ಬಿ.ಎಸ್.ಮಂಜುಳಾ, ವಿಮರ್ಶಕ ರವಿಕುಮಾರ್ ನೀಹ ವಿಷಯ ಮಂಡಿಸಲಿದ್ದಾರೆ. ಕಥೆಗಾರ ತುಂಬಾಡಿ ರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. 30ರಂದು ಬೆಳಿಗ್ಗೆ 9 ಗಂಟೆಗೆ ನಡೆಯುವ ಮಕ್ಕಳ ಗೋಷ್ಠಿಯಲ್ಲಿ ‘ಕನ್ನಡ ಉಳಿಸುವಲ್ಲಿ ಕನ್ನಡಿಗರ ಪಾತ್ರ’, ‘ಮಕ್ಕಳಿಗೆ ಅಜ್ಜ, ಅಜ್ಜಿಯರ ಅವಶ್ಯಕತೆ’, ‘ಮಕ್ಕಳಿಗೆ ಮೊಬೈಲ್ ಬೇಕೇ?’ ಎಂಬ ವಿಚಾರಗಳ ಕುರಿತು ಮಕ್ಕಳು ಮಾತನಾಡಲಿದ್ದಾರೆ ಎಂದರು.</p><p>‘30 ರಂದು ಮಧ್ಯಾಹ್ನ 3 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಎರಡು ದಿನ 3 ಸಾವಿರದಿಂದ 4 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ. ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಶಿಕ್ಷಕರಿಗೆ ರಜೆ ನೀಡಲಾಗಿದೆ. ಹೆಸರಾಂತ ಸಾಹಿತಿ, ಕವಿ, ಕಥೆಗಾರರನ್ನು ಒಂದು ವೇದಿಕೆಗೆ ತರುವ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.</p><p>ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಗೌರವ ಕಾರ್ಯದರ್ಶಿ ಡಿ.ಎನ್.ಯೋಗೀಶ್ವರಪ್ಪ ಹಾಜರಿದ್ದರು.</p>.<p><strong>ಗಮನ ಸೆಳೆದ ಮಹಿಳೆಯರ ಬೈಕ್ ರ್ಯಾಲಿ</strong></p><p><strong>ತುಮಕೂರು:</strong> ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ನಗರದಲ್ಲಿ ಶನಿವಾರ ಮಹಿಳೆಯರ ಬೈಕ್ ರ್ಯಾಲಿ ಏರ್ಪಡಿಸಲಾಗಿತ್ತು. ಮಹಿಳೆಯರು ಕನ್ನಡದ ಬಾವುಟ ಹಿಡಿದು ನಗರದಲ್ಲಿ ಸಂಚರಿಸಿದರು.</p><p>ಅಮಾನಿಕೆರೆಯ ಗಾಜಿನಮನೆ ಬಳಿ ರ್ಯಾಲಿಗೆ ಚಾಲನೆ ನೀಡಲಾಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ರ್ಯಾಲಿಗೆ ಹಸಿರು ನಿಶಾನೆ ತೋರಿದರು.</p><p>ಕೋತಿತೋಪು ಮುಖ್ಯರಸ್ತೆಯಿಂದ ಎಸ್.ಎಸ್.ವೃತ್ತ ತಲುಪಿತು. ಬಿ.ಎಚ್.ರಸ್ತೆ ಮೂಲಕ ಎಸ್ಐಟಿ ಮುಖ್ಯರಸ್ತೆಗೆ ಸಾಗಿತು. ಗಂಗೋತ್ರಿ ರಸ್ತೆ, ಸರಸ್ವತಿ ಪುರಂ, ಭದ್ರಮ್ಮ ಛತ್ರ ವೃತ್ತ ಸೇರಿತು. ಟೌನ್ಹಾಲ್ನಿಂದ ಮುಂದೆ ಸಾಗಿ ಅಶೋಕ ರಸ್ತೆ, ಸ್ವಾತಂತ್ರ್ಯ ಚೌಕದಿಂದ ಗಾಜಿನಮನೆ ಬಳಿ ಕೊನೆಯಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ ಆರಂಭವಾಗಿದೆ. ನಗರದ ಅಮಾನಿಕೆರೆ ಗಾಜಿನಮನೆಯಲ್ಲಿ ಡಿ. 29 ಹಾಗೂ 30ರಂದು ವಿವಿಧ ವಿಚಾರ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.</p><p>ಗಾಜಿನಮನೆಯಲ್ಲಿ ವೇದಿಕೆ, ಆಸನಗಳ ವ್ಯವಸ್ಥೆ ಸೇರಿ ಅಗತ್ಯ ಪೂರ್ವ ತಯಾರಿ ಕೆಲಸಗಳು ಭರದಿಂದ ಸಾಗಿವೆ. ಮಕ್ಕಳ ಗೋಷ್ಠಿ, ಸಮ್ಮೇಳನಾಧ್ಯಕ್ಷರ ಜತೆ ಸಂವಾದ, ತುಮಕೂರು ನೆಲದ ಧಾರ್ಮಿಕ ಪರಂಪರೆ, ಕವಿಗೋಷ್ಠಿ ಒಳಗೊಂಡಂತೆ ಒಟ್ಟು 7 ಗೋಷ್ಠಿಗಳು ನಡೆಯಲಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ.</p><p>‘ಸಾಹಿತಿ ಕರೀಗೌಡ ಬೀಚನಹಳ್ಳಿ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಶಾಸಕ ಟಿ.ಬಿ.ಜಯಚಂದ್ರ, ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಮೊದಲಾದವರು ಭಾಗವಹಿಸಲಿದ್ದಾರೆ’ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಇಲ್ಲಿ ಶನಿವಾರ ಹೇಳಿದರು.</p><p>29ರಂದು ಮಧ್ಯಾಹ್ನ 2 ಗಂಟೆಗೆ ‘ದಲಿತ ಸಾಹಿತ್ಯ ಐವತ್ತು– ಬಂಡಾಯ ನಲವತ್ತಾರು’ ಗೋಷ್ಠಿ ಏರ್ಪಡಿಸಲಾಗಿದೆ. ಮುಖಂಡ ಕೊಟ್ಟಶಂಕರ್, ನಿವೃತ್ತ ಪ್ರಾಧ್ಯಾಪಕಿ ಬಿ.ಎಸ್.ಮಂಜುಳಾ, ವಿಮರ್ಶಕ ರವಿಕುಮಾರ್ ನೀಹ ವಿಷಯ ಮಂಡಿಸಲಿದ್ದಾರೆ. ಕಥೆಗಾರ ತುಂಬಾಡಿ ರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. 30ರಂದು ಬೆಳಿಗ್ಗೆ 9 ಗಂಟೆಗೆ ನಡೆಯುವ ಮಕ್ಕಳ ಗೋಷ್ಠಿಯಲ್ಲಿ ‘ಕನ್ನಡ ಉಳಿಸುವಲ್ಲಿ ಕನ್ನಡಿಗರ ಪಾತ್ರ’, ‘ಮಕ್ಕಳಿಗೆ ಅಜ್ಜ, ಅಜ್ಜಿಯರ ಅವಶ್ಯಕತೆ’, ‘ಮಕ್ಕಳಿಗೆ ಮೊಬೈಲ್ ಬೇಕೇ?’ ಎಂಬ ವಿಚಾರಗಳ ಕುರಿತು ಮಕ್ಕಳು ಮಾತನಾಡಲಿದ್ದಾರೆ ಎಂದರು.</p><p>‘30 ರಂದು ಮಧ್ಯಾಹ್ನ 3 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಎರಡು ದಿನ 3 ಸಾವಿರದಿಂದ 4 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ. ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಶಿಕ್ಷಕರಿಗೆ ರಜೆ ನೀಡಲಾಗಿದೆ. ಹೆಸರಾಂತ ಸಾಹಿತಿ, ಕವಿ, ಕಥೆಗಾರರನ್ನು ಒಂದು ವೇದಿಕೆಗೆ ತರುವ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.</p><p>ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಗೌರವ ಕಾರ್ಯದರ್ಶಿ ಡಿ.ಎನ್.ಯೋಗೀಶ್ವರಪ್ಪ ಹಾಜರಿದ್ದರು.</p>.<p><strong>ಗಮನ ಸೆಳೆದ ಮಹಿಳೆಯರ ಬೈಕ್ ರ್ಯಾಲಿ</strong></p><p><strong>ತುಮಕೂರು:</strong> ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ನಗರದಲ್ಲಿ ಶನಿವಾರ ಮಹಿಳೆಯರ ಬೈಕ್ ರ್ಯಾಲಿ ಏರ್ಪಡಿಸಲಾಗಿತ್ತು. ಮಹಿಳೆಯರು ಕನ್ನಡದ ಬಾವುಟ ಹಿಡಿದು ನಗರದಲ್ಲಿ ಸಂಚರಿಸಿದರು.</p><p>ಅಮಾನಿಕೆರೆಯ ಗಾಜಿನಮನೆ ಬಳಿ ರ್ಯಾಲಿಗೆ ಚಾಲನೆ ನೀಡಲಾಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ರ್ಯಾಲಿಗೆ ಹಸಿರು ನಿಶಾನೆ ತೋರಿದರು.</p><p>ಕೋತಿತೋಪು ಮುಖ್ಯರಸ್ತೆಯಿಂದ ಎಸ್.ಎಸ್.ವೃತ್ತ ತಲುಪಿತು. ಬಿ.ಎಚ್.ರಸ್ತೆ ಮೂಲಕ ಎಸ್ಐಟಿ ಮುಖ್ಯರಸ್ತೆಗೆ ಸಾಗಿತು. ಗಂಗೋತ್ರಿ ರಸ್ತೆ, ಸರಸ್ವತಿ ಪುರಂ, ಭದ್ರಮ್ಮ ಛತ್ರ ವೃತ್ತ ಸೇರಿತು. ಟೌನ್ಹಾಲ್ನಿಂದ ಮುಂದೆ ಸಾಗಿ ಅಶೋಕ ರಸ್ತೆ, ಸ್ವಾತಂತ್ರ್ಯ ಚೌಕದಿಂದ ಗಾಜಿನಮನೆ ಬಳಿ ಕೊನೆಯಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>