ಸಂಘದ ಅಧ್ಯಕ್ಷ ಮಂಜುನಾಥ್ ಅಮಲಗೊಂದಿ ಮಾತನಾಡಿ, ರಾಜ್ಯದಲ್ಲಿ 1974ರಲ್ಲಿ ಜಾರಿಗೆ ಬಂದ ಭೂ ಸುಧಾರಣೆ ಕಾಯ್ದೆ ಮಹತ್ವಪೂರ್ಣ ಪಾತ್ರ ನಿರ್ವಹಿಸಿದೆ. ಕೃಷಿ ಭೂಮಿ ಉಳ್ಳವರ ಹಿಡಿತಕ್ಕೆ ಒಳಗಾಗದಂತೆ ನಿರ್ಬಂಧ ವಿಧಿಸಲಾಗಿತ್ತು. ರೈತರಲ್ಲದವರಿಗೆ ಕೃಷಿಭೂಮಿಯ ವರ್ಗಾವಣೆ ಮಾಡುವುದನ್ನು ನಿಷೇಧಿಸಲಾಗಿದೆ. ಸರ್ಕಾರ ತಿದ್ದುಪಡಿ ತರುವ ಮೂಲಕ ಭೂಮಿಯನ್ನು ಉಳುವವನ ಕೈಯಿಂದ ಕಿತ್ತು ಊಳಿಸುವವನಿಗೆ ನೀಡುತ್ತಿದೆ ಎಂದು ದೂರಿದರು.