<p><strong>ಕೊರಟಗೆರೆ:</strong> ಆಹಾರ ಹರಸಿ ಬಂದ ಚಿರತೆ ಮೂವರ ಮೇಲೆ ದಾಳಿ ನಡೆಸಿರುವ ಘಟನೆ ತಾಲ್ಲೂಕಿನ ಗುಂಡನಪಾಳ್ಯದಲ್ಲಿ ಗರುವಾರ ಬೆಳಿಗ್ಗೆ ನಡೆದಿದೆ.</p>.<p>ತಾಲ್ಲೂಕಿನ ಹುಲಿಕುಂಟೆ ವ್ಯಾಪ್ತಿಯ ಗುಂಡನಪಾಳ್ಯ ಗ್ರಾಮದ ಕಾಮರಾಜು ಎಂಬುವರಿಗೆ ಸೇರಿದ ಅಡಕೆ ತೋಟದಲ್ಲಿ ಗುರುವಾರ ಬೆಳಿಗ್ಗೆ ಚಿರತೆ ಕಾಣಿಸಿಕೊಂಡಿದೆ.</p>.<p>ಈ ಸಂದರ್ಭದಲ್ಲಿ ಅಟ್ಟಿಸಲು ಹೋದ ಮೂರು ಜನ ಯುವಕರ ಮೇಲೆ ದಾಳಿ ನಡೆಸಿದ್ದು, ಪರಚಿದ ಗಾಯಗಳಾಗಿದೆ. ಗ್ರಾಮದ ಶ್ರೀಧರ, ಹರೀಶ್ ಬಾಬು, ನಟರಾಜು ಗಾಯಗೊಂಡವರು.</p>.<p>ಈ ಸಂದರ್ಭದಲ್ಲಿ ಸ್ಥಳದಲ್ಲಿ ಇದ್ದ ಅರಣ್ಯ ಇಲಾಖೆ ಜೀಪ್ ಡ್ರೈವರ್ ವೇಣುಗೋಪಾಲ್ ಎಂಬುವರಿಗೂ ತರಚಿದ ಗಾಯಗಳಾಗಿದೆ. ಸಾರ್ವಜನಿಕರ ಕೂಗಾಟದಿಂದ ಅಲ್ಲಿಂದ ಪರಾರಿಯಾಗಿದೆ.</p>.<p>ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಅರಣ್ಯಾಧಿಕಾರಿಗಳು ಮನವಿ ಮಾಡಿದ್ದಾರೆ. ಸ್ಥಳಕ್ಕೆ ಅರಣ್ಯ ಅಧಿಕಾರಿ ಸತೀಶ್ ಚಂದ್ರ, ಸಿಪಿಐ ಎಫ್.ಕೆ. ನದಾಫ್ ಭೇಟಿ ನೀಡಿದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಕೊರಟಗೆರೆ:</strong> ಆಹಾರ ಹರಸಿ ಬಂದ ಚಿರತೆ ಮೂವರ ಮೇಲೆ ದಾಳಿ ನಡೆಸಿರುವ ಘಟನೆ ತಾಲ್ಲೂಕಿನ ಗುಂಡನಪಾಳ್ಯದಲ್ಲಿ ಗರುವಾರ ಬೆಳಿಗ್ಗೆ ನಡೆದಿದೆ.</p>.<p>ತಾಲ್ಲೂಕಿನ ಹುಲಿಕುಂಟೆ ವ್ಯಾಪ್ತಿಯ ಗುಂಡನಪಾಳ್ಯ ಗ್ರಾಮದ ಕಾಮರಾಜು ಎಂಬುವರಿಗೆ ಸೇರಿದ ಅಡಕೆ ತೋಟದಲ್ಲಿ ಗುರುವಾರ ಬೆಳಿಗ್ಗೆ ಚಿರತೆ ಕಾಣಿಸಿಕೊಂಡಿದೆ.</p>.<p>ಈ ಸಂದರ್ಭದಲ್ಲಿ ಅಟ್ಟಿಸಲು ಹೋದ ಮೂರು ಜನ ಯುವಕರ ಮೇಲೆ ದಾಳಿ ನಡೆಸಿದ್ದು, ಪರಚಿದ ಗಾಯಗಳಾಗಿದೆ. ಗ್ರಾಮದ ಶ್ರೀಧರ, ಹರೀಶ್ ಬಾಬು, ನಟರಾಜು ಗಾಯಗೊಂಡವರು.</p>.<p>ಈ ಸಂದರ್ಭದಲ್ಲಿ ಸ್ಥಳದಲ್ಲಿ ಇದ್ದ ಅರಣ್ಯ ಇಲಾಖೆ ಜೀಪ್ ಡ್ರೈವರ್ ವೇಣುಗೋಪಾಲ್ ಎಂಬುವರಿಗೂ ತರಚಿದ ಗಾಯಗಳಾಗಿದೆ. ಸಾರ್ವಜನಿಕರ ಕೂಗಾಟದಿಂದ ಅಲ್ಲಿಂದ ಪರಾರಿಯಾಗಿದೆ.</p>.<p>ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಅರಣ್ಯಾಧಿಕಾರಿಗಳು ಮನವಿ ಮಾಡಿದ್ದಾರೆ. ಸ್ಥಳಕ್ಕೆ ಅರಣ್ಯ ಅಧಿಕಾರಿ ಸತೀಶ್ ಚಂದ್ರ, ಸಿಪಿಐ ಎಫ್.ಕೆ. ನದಾಫ್ ಭೇಟಿ ನೀಡಿದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>