ಮಠದ ಆವರಣದಲ್ಲಿ ಗಣ್ಯರ ಸಮ್ಮುಖದಲ್ಲಿ ವೇದಘೋಷ, ಮಂತ್ರಪಠಣದೊಂದಿಗೆ ನಡೆಸಲಾಯಿತು. ಶಿಷ್ಯತ್ವ ಸ್ವೀಕಾರ ಸಮಾರಂಭ ನಡೆಯಿತು. ಶಾಸಕ ಜೆ.ಸಿ.ಮಾಧುಸ್ವಾಮಿ, ಮಾಜಿ ಸಚಿವ ಸೊಗಡುಶಿವಣ್ಣ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಚ್.ಬಿ.ಪಂಚಾಕ್ಷರಿ, ಬಿ.ಎನ್.ಶಿವಪ್ರಕಾಶ್, ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಶಶಿಧರ್, ಟಿಎಪಿಎಂಸಿ ಅಧ್ಯಕ್ಷ ಶ್ರೀಧರ್ ಹಾಜರಿದ್ದರು.