ಆಂಧ್ರಪ್ರದೇಶದ ನಾಗರಾಜು, ಧರ್ಮಾವರಂ ಪದ್ಮ, ರಾಮಗಿರಿ ತಲ್ಲಿಮಡುಗು ಗ್ರಾಮದ ಬೋಯ ಓಬಳೇಶ್, ರಾಮಮೋಹನ್, ಬೋಯ ಆಂಜನೇಯುಲು ಅವರನ್ನು ಪೊಲೀಸರು ಭಾನುವಾರ ಆಂಧ್ರ ಪ್ರದೇಶದಲ್ಲಿ ಬಂಧಿಸಿ ಪಟ್ಟಣದ ಪೊಲೀಸ್ ಠಾಣೆಗೆ ಕರೆ ತಂದು ಪ್ರಶ್ನಿಸಿದ್ದರು. ಮಧ್ಯಾಹ್ನದ ವೇಳೆಗೆ ಆರೋಪಿಗಳನ್ನು ಬಿಗಿ ಭದ್ರತೆಯಲ್ಲಿ ಪಟ್ಟಣದ ಪ್ರಧಾನ ಸಿವಿಲ್ ನ್ಯಾಯಾಲಯಕ್ಕೆ ಕರೆ ತರಲಾಯಿತು. ಆರೋಪಿ ಮಹಿಳೆಯನ್ನು ಬೆಂಗಳೂರು ಜೈಲಿಗೂ ಮತ್ತು ಇತರ ಆರೋಪಿಗಳನ್ನು ಮಧುಗಿರಿ ಜೈಲಿಗೆ ಕರೆದೊಯ್ಯಲಾಯಿತು.