ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ, ತುಮಕೂರು ನಗರ ಡಿಎಸ್ಪಿ ಕೆ.ಎಸ್.ನಾಗರಾಜ್ ಹಾಗೂ ಇತರ ಅಧಿಕಾರಿಗಳಿದ್ದರು.
ಕುಣಿದು ಕುಪ್ಪಳಿಸಿದರು: ಕೊನೆ ದಿನ ನಡೆದ ಸ್ಪರ್ಧೆಗಳನ್ನು ವೀಕ್ಷಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕುಟುಂಬ ವರ್ಗದವರು ಕ್ರೀಡಾ ಲೋಕದಲ್ಲಿ ವಿಹರಿಸಿದರು. ತಮ್ಮ ತಮ್ಮ ತಂಡಗಳನ್ನು, ಆಟಗಾರರನ್ನು ಹುರುದುಂಬಿಸಿದರು. ವಿಶೇಷವಾಗಿ ಹಗ್ಗ ಜಗ್ಗಾಟ, ಓಟದಲ್ಲಿ ಗೆಲುವಿಗೆ ನಡೆದ ಸೆಣಸಾಟ ರಣರಂಗ ನೆನಪಿಸಿತು.