‘ಆರಂಭದಲ್ಲಿ ನೆರೆಹೊರೆಯ ಕೆಲವರು ಏನೋ ಆಗಬಾರದು, ನಮ್ಮ ಮನೆಯಲ್ಲಿ ಆಗಿದೆ ಎಂದು ನಮಗಿಂತಲೂ ಹೆಚ್ಚು ಭೀತಿಗೆ ಒಳಗಾಗಿದ್ದರು. ವೈದ್ಯರ ಚಿಕಿತ್ಸೆ, ಅಧಿಕಾರಿಗಳ ನೆರವು, ಪೊಲೀಸರ ಸಹಕಾರದಿಂದ ನಮ್ಮ ಮೊಹಲ್ಲಾದ ಪರಿಸ್ಥಿತಿ ಈಗ ಸಂಪೂರ್ಣ ಸುಧಾರಿಸಿದೆ. ಸರ್ಕಾರದಿಂದಲೇ ಮನೆಗೆ ಬೇಕಾದ ದಿನಸಿ ಉಚಿತವಾಗಿ ಸರಬರಾಜು ಆಗುತ್ತಿದೆ. ತಾಲ್ಲೂಕು ಆಡಳಿತ ನಮ್ಮನ್ನು ದೊಡ್ಡ ಸಂಕಷ್ಟದಿಂದ ಪಾರು ಮಾಡಿತು. ಅವರಿಗೆ ತುಂಬಾ ಥ್ಯಾಂಕ್ಸ್’ ಎಂದು ಬಾಲಕನ ಸಂಬಂಧಿಯೊಬ್ಬರು ಸಂತಸದಿಂದ ಹೇಳಿದರು.