ಗುಬ್ಬಿ: ಬೃಹತ್ ವಿದ್ಯುತ್ ತಂತಿಯ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡು ತಾಲ್ಲೂಕಿನ ನಿಟ್ಟೂರು ಹೋಬಳಿ ಕಳ್ಳನಹಳ್ಳಿಯ ರೈತ ರಂಗಯ್ಯ ಅವರಿಗೆ ಸೇರಿದ ಫಸಲಿಗೆ ಬಂದಿದ್ದ 50 ತೆಂಗಿನ ಸಸಿ, 100ಕ್ಕೂ ಹೆಚ್ಚು ಅಡಿಕೆ ಸಸಿ, ನೀರಾವರಿ ಪೈಪ್, ರಾಸುಗಳಿಗಾಗಿ ಹಾಕಿದ್ದ ಮೇವು ಸಂಪೂರ್ಣ ಸುಟ್ಟು ಹೋಗಿವೆ.
ಸಂಬಂಧಿಸಿದವರು ಸೂಕ್ತ ಪರಿಹಾರ ನೀಡದಿದ್ದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿ, ಜೀವನ ನಿರ್ವಹಣೆ ಕಷ್ಟವಾಗುವುದು. ಬದುಕು ಕಟ್ಟಿಕೊಳ್ಳಲು ಸಹಕಾರ ಬೇಕಿದೆ ಎಂದು ರೈತ ರಂಗಯ್ಯ ಅಳಲು ತೋಡಿಕೊಂಡರು.