ಈಗಿನ ಶಿಕ್ಷಣ ಪದ್ಧತಿಯು ಪ್ರಗತಿಗೆ ವಿರೋಧವಾಗಿದೆ. ಕೌಶಲ, ಉದ್ಯೋಗ ಮತ್ತು ಜ್ಞಾನಾಧಾರಿತ ಸೇರಿದಂತೆ ಎಲ್ಲರನ್ನೂ ಎನ್ಇಪಿ ಒಳಗೊಂಡಿತ್ತು. ಅಂಗನವಾಡಿಯಿಂದ ವಿಶ್ವವಿದ್ಯಾಲಯ ಮಟ್ಟದವರೆಗೂ ವ್ಯಕ್ತಿಯ ಸರ್ವತೋಮುಖ ವಿಕಾಸಕ್ಕಾಗಿ ಗುಣಾತ್ಮಕ ಶಿಕ್ಷಣ ಪದ್ಧತಿಯನ್ನು ಇದು ಒಳಗೊಂಡಿದೆ. ಇದನ್ನು ಕಾಂಗ್ರೆಸ್ ಸರ್ಕಾರ ಕೇವಲ ರಾಜಕೀಯ ಸಂಕುಚಿತ ನೆಲೆಯಲ್ಲಿ ವಾಪಸ್ ಪಡೆದಿರುವುದನ್ನು ಖಂಡಿಸಿದ್ದಾರೆ.