ತಿಪಟೂರು: ಶ್ವಾನಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಕಿತ್ಸೆ ನಡೆಸುವಂತೆ ಒತ್ತಾಯ
ಪ್ರಶಾಂತ್ ಕೆ.ಆರ್.
Published : 10 ಜನವರಿ 2026, 6:00 IST
Last Updated : 10 ಜನವರಿ 2026, 6:00 IST
ಫಾಲೋ ಮಾಡಿ
Comments
ತಿಪಟೂರಿನಲ್ಲಿ ಬೀದಿ ನಾಯಿಗಳು
ನಾಯಿ ಕಡಿತಕ್ಕೆ ತುತ್ತಾದವರೆಗೆ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು. ತಾಲ್ಲೂಕು ಆಸ್ಪತ್ರೆಯಲ್ಲಿ ಹುಚ್ಚುನಾಯಿ ಕಡಿತಕ್ಕೆ ₹70 ಸಾವಿರ ಮೌಲ್ಯದ ಔಷಧಿ ಉಚಿತವಾಗಿ ಲಭ್ಯವಿದೆ.
ಚನ್ನಕೇಶವ್ ತಾಲ್ಲೂಕು ಆರೋಗ್ಯ ಅಧಿಕಾರಿ
ಈಗಾಗಲೇ ಪಿಡಿಒಗಳಿಗೆ ಸೂಚನೆ ನೀಡಿದ್ದು ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಕಡಿತ ಸಾವು ಸಂಭವಿಸಿದಾಗ ಎಬಿಸಿ ಯೋಜನೆಗಾಗಿ ತಾ.ಪಂ ಗ್ರಾ.ಪಂ ಯೋಜನೆಗಳಲ್ಲಿ ಶೇ 2ರಷ್ಟು ಹಣ ವಿನಿಯೋಗಿಸಲಾಗುತ್ತಿದೆ.
ಎಚ್. ಎಂ. ಸುದರ್ಶನ್ ತಾ.ಪಂ ಇಒ
ಶ್ವಾನಗೃಹ ನಿರ್ಮಾಣಕ್ಕೆ ಟೆಂಡರ್ ನ್ಯಾಯಾಲಯದ ಆದೇಶದಂತೆ ಬೀದಿನಾಯಿಗಳ ಹಾವಳಿ ತಡೆಗೆ ನಾಯಿಗಳ ಸರ್ವೆ ಮಾಡಲಾಗಿದೆ. ₹50 ಲಕ್ಷದ ವೆಚ್ಚದಲ್ಲಿ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಹಾಗೂ ಬೀದಿನಾಯಿಗಳ ಶ್ವಾನಗೃಹ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. ನಾಯಿ ಕಡಿತಕ್ಕೆ ಒಳಗಾದವರು ನಗರಸಭೆಗೆ ಅರ್ಜಿ ಸಲ್ಲಿಸಿದರೆ ₹5 ಸಾವಿರ ಪರಿಹಾರ ನೀಡಲಾಗುವುದು. ಈವರೆಗೂ ಒಂದು ಅರ್ಜಿ ಮಾತ್ರ ಸಲ್ಲಿಕೆಯಾಗಿದ್ದು ಪರಿಶೀಲನೆ ನಡೆಯುತ್ತಿದೆ.