ಆರೋಗ್ಯ ಸಮಸ್ಯೆಯಾದರೆ ವೈದ್ಯರ ಬಳಿ, ರಕ್ಷಣೆಗೆ ಪೊಲೀಸರ ಬಳಿ, ನ್ಯಾಯಕ್ಕಾಗಿ ನ್ಯಾಯಾಲಯ, ವಕೀಲರ ಬಳಿ ಸಾರ್ವಜನಿಕರು ಹೆಚ್ಚು ಬರುತ್ತಾರೆ. ತ್ವರಿತ ನ್ಯಾಯದ ನಿರೀಕ್ಷೆಯ ಸಾಕಾರಕ್ಕೆ ವಕೀಲರ ಶ್ರಮ ಅವಶ್ಯಕವಾಗಿದೆ. ಈಚೆಗೆ ವಕೀಲರಲ್ಲಿ ಅಧ್ಯಯನ ಶೀಲತೆ ಕಡಿಮೆ ಆಗಿದೆ. ವಿಶೇಷವಾಗಿ ಯುವ ವಕೀಲರಲ್ಲಿ ಈ ಕೊರತೆ ಹೆಚ್ಚು ಎದ್ದು ಕಾಣುತ್ತದೆ. ಈ ಪರಿಸ್ಥಿತಿ ಬದಲಾಗಬೇಕು ಎಂದು ಹೇಳಿದರು.