ಇಲ್ಲಿನ ಜನರು ಕೂಲಿಯನ್ನು ನಂಬಿ ಜೀವನ ಮಾಡುತ್ತಿದ್ದಾರೆ. ಇಲ್ಲಿ ಈಗ ಮದ್ಯದಂಗಡಿ ತೆರೆದರೆ ಕುಟುಂಬಗಳು ಬೀದಿಗೆ ಬೀಳುವ ಸಂಭವವೇ ಹೆಚ್ಚಾಗಿದೆ. ಪರವಾನಗಿ ನೀಡಿದರೆ ಉಗ್ರ ಹೋರಾಟವನ್ನು ಮಾಡುವುದಾಗಿ ಗ್ರಾಮಸ್ಥರಾದ ಸುಬ್ರಹ್ಮಣ್ಯ, ಗಿರೀಶ, ಮಧುಸೂದನ್, ರವಿ, ಗಂಗಾಧರ್, ಮನೋಹರ ನರಸಿಂಹಮೂರ್ತಿ, ರಾಮಾಂಜಿ, ರತ್ನಮ್ಮ, ಪ್ರಮೀಳಾ, ಕಲಾವತಿ, ಲಕ್ಷ್ಮಮ್ಮ, ಪ್ರಭಾಕರ್ ಹೇಳಿದರು.