ಸೋಲೂರಿನ ಬಳಿ ಬಂದಾಗ ಉಳಿದ ಪ್ರಯಾಣಿಕರು ಇಳಿದಿದ್ದು, ಹರೀಶ್ ಒಬ್ಬರೇ ಇದ್ದರು. ಕಾರಿನಲ್ಲಿದ್ದವರು ಹರೀಶ್ ಅವರನ್ನು ಕಟ್ಟಿ ಹಾಕಿ ಬಾಯಿಗೆ ಬಟ್ಟೆ ತುರುಕಿ ಚಿನ್ನದ ಸರ, ಬ್ರಾಸ್ಲೈಟ್, ಉಂಗುರ ಮತ್ತು ₹ 20 ಸಾವಿರ, ಮೊಬೈಲ್ ದೋಚಿ, ಹರೀಶ್ ಅವರನ್ನು ತಾಲ್ಲೂಕಿನ ಕಣಿವೆಪಾಳ್ಯ ಬಳಿ ಎಸೆದು ಹೋಗಿದ್ದಾರೆ. ನಂತರ ಕಟ್ಟುಗಳನ್ನು ಬಿಚ್ಚಿಕೊಂಡು ಕುಣಿಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.