ಹೋಬಳಿಯ ನಲ್ಲೂರುಹಟ್ಟಿ ಬಳಿಯ ಮಲ್ಲಯ್ಯನ ಕಟ್ಟೆ (ಗೋಕಟ್ಟೆ) ಬಳಿ ಗುರುವಾರ ಹಸುಗಳನ್ನು ಮೈ ತೊಳೆಯಲು ಹೋದ ತಾಯಿ, ಇಬ್ಬರು ಮಚೇಳೂರು: ಕ್ಕಳು ನೀರುಪಾಲಾಗಿದ್ದಾರೆ.
ರತ್ನಮ್ಮ (38), ಮಕ್ಕಳಾದ ಚೇತನ್ (15), ಚಂದ್ರಿಕಾ (18) ಮೃತರು. ತಾಯಿ, ಮಗಳು ಹಸು ಮೈ ತೊಳೆಯುವಾಗ ಚೇತನ್ ನೀರಿನಲ್ಲಿ ಮುಳುಗಿದ್ದಾನೆ. ಆಗ ರತ್ನಮ್ಮ, ಚಂದ್ರಿಕಾ ಆತನನ್ನು ಎಳೆದುಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಈಜು ಬಾರದೆ ಮೂವರೂ ನೀರಿನಲ್ಲಿ ಮುಳುಗಿದ್ದಾರೆ.
ಸ್ಥಳಕ್ಕೆ ತಹಶೀಲ್ದಾರ್ ಪ್ರದೀಪ್ ಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ರಾಮಕೃಷ್ಣ, ಸಬ್ಇನ್ಸ್ಪೆಕ್ಟರ್ ವಿಜಯ್ ಕುಮಾರ್ ಭೇಟಿ ನೀಡಿದ್ದರು. ಚೇಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.