ಸಂಕ್ರಾಂತಿ ಹಬ್ಬದ ಸಮಯದಲ್ಲಿ ಎಳ್ಳು-ಬೆಲ್ಲದ ಜೊತೆಗೆ ವಿಶೇಷವಾಗಿ ಕೊಬ್ಬರಿ ಬಳಸುತ್ತಾರೆ. ದೇಶದ ಅತ್ಯಂತ ದೊಡ್ಡ ಕೊಬ್ಬರಿ ಮಾರುಕಟ್ಟೆಗಳಲ್ಲಿ ತಿಪಟೂರು ಕೊಬ್ಬರಿ ಮಾರುಕಟ್ಟೆ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ರಾಜ್ಯದ ಕೊಬ್ಬರಿ ಮಾರಾಟದ ಕೇಂದ್ರ ಬಿಂದುವಾಗಿದೆ. ಇಲ್ಲಿ ವ್ಯಾಪಾರ–ವಹಿವಾಟು ನಿರಂತರವಾಗಿ ನಡೆಯುತ್ತದೆ.