ಸದ್ಯ ತಾಲ್ಲೂಕು ಪಂಚಾಯಿತಿಯಲ್ಲಿನ ನಿರುಪಯುಕ್ತ ವಸ್ತುಗಳನ್ನು ತುಂಬುವ ಗೋದಾಮಾಗಿ ಪರಿವರ್ತನೆಯಾಗಿದೆ. ಕಟ್ಟಡದ ಕೆಲವು ಕೊಠಡಿಗಳಿಗೆ ಬೀಗ ಹಾಕದ ಕಾರಣ ಅನೈತಿಕ ಚಟುವಟಿಕೆ ತಾಣವೂ ಆಗಿದೆ. ಕಟ್ಟಡ ಬಳಕೆಯಾಗದ ಕಾರಣ ಕಿಟಕಿ, ಬಾಗಿಲುಗಳು ಕಿಡಿಗೇಡಿಗಳ ಪುಂಡಾಟಿಕೆಗೆ ಬಲಿಯಾಗಿವೆ. ಮಳೆ ನೀರು ಕಟ್ಟಡದ ತುಂಬ ನಿಲ್ಲುವಂತಾಗಿದೆ.