ತುಮಕೂರು ಜಿಲ್ಲೆಯ ಮಣುವಿನ ಕುರಿಕೆ ಗ್ರಾಮದ ನಿವಾಸಿ ರಾಜೇಶ್ವರಿಯವರ ಯಶೋಗಾಥೆಯ ಮೊದಲ ಅಧ್ಯಾಯ ಶುರುವಾದದ್ದು ಕೋವಿಡ್ ಮಹಾಮಾರಿಯ ಸಮಯದಲ್ಲಿ. ಕೋವಿಡ್ಗೂ ಮುನ್ನ ತುಮಕೂರು ನಗರದಲ್ಲಿ ತಮ್ಮದೇ ಆದ ಸ್ವಂತ ಟ್ರಾವೆಲ್ಸ್ ನಡೆಸುತ್ತಿದ್ದರು ರಾಜೇಶ್ವರಿ. ಕೋವಿಡ್ ನೀಡಿದ ಹೊಡೆತಕ್ಕೆ ಟ್ರಾವೆಲ್ಸ್ ಬಾಗಿಲು ಮುಚ್ಚಿತು. ಆನಂತರ ತಮ್ಮೂರಿಗೆ ವಾಪಸ್ ಆದವರು ಹೈನುಗಾರಿಕೆ ಶುರು ಮಾಡಿದರು.