ಚನ್ನರಾಯನ ದುರ್ಗ ಹೋಬಳಿ ಕುರಂಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಕ್ಕೆಗುಟ್ಟೆಯಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಬಂಡೆಗಳಿಗೆ ಮದ್ದುಗಳನ್ನು ಇಟ್ಟು ಸಿಡಿಸಲಾಗುತ್ತಿದೆ. ಪ್ರತಿ ದಿನ ನೂರಾರು ಲಾರಿಗಳು ಕಲ್ಲು ಪುಡಿ ತುಂಬಿಕೊಂಡು ತೋವಿನಕೆರೆ ಮೂಲಕ ದೂಳು ಎಬ್ಬಿಸಿಕೊಂಡು ಸಾಗುತ್ತವೆ. ಈ ಗಣಿಗಾರಿಕೆಯಿಂದ ಸುತ್ತಮುತ್ತಲ ಗ್ರಾಮಸ್ಥರಿಗೆ ಆಗುತ್ತಿರುವ ಸಮಸ್ಯೆ ಒಂದೆರಡಲ್ಲ. ಜನ– ಜಾನುವಾರು, ಬೆಳೆಗಳ ಮೇಲೆ, ಕಡೆಗೆ ತಿನ್ನುವ ಅನ್ನದ ಮೇಲು ದುಷ್ಪರಿಣಾಮ ಬೀರುತ್ತಿದೆ.