ಪಶ್ಚಿಮದಲ್ಲಿ ಸ್ತ್ರೀವಾದ ಹಾದು ಬಂದ ಘಟ್ಟಗಳನ್ನು ಪರಿಚಯಿಸುತ್ತ, ಕನ್ನಡದಲ್ಲಿ ಮಹಿಳಾ ಸಾಹಿತ್ಯ ಮತ್ತು ವಿಮರ್ಶೆಯ ಚರಿತ್ರೆಯ ಮೇಲೆ ಬೆಳಕು ಚೆಲ್ಲಿದರು. ಅಲಕ್ಷ್ಯಕ್ಕೆ ಒಳಗಾಗಿದ್ದ ಲೇಖಕಿಯರ ಬರಹಗಳನ್ನು ಎನ್.ಗಾಯತ್ರಿ, ವಿಜಯಾ ದಬ್ಬೆ ಮುಂತಾದ ವಿಮರ್ಶಕಿಯರು ಮರು ಶೋಧಿಸಿ, ಚರ್ಚಿಸಿದ್ದಾರೆ. ಅಲ್ಲದೆ, ಕನ್ನಡ ಸಾಹಿತ್ಯವನ್ನು ಸ್ತ್ರೀವಾದಿ ಓದಿಗೆ ಒಳಪಡಿಸಿ, ಸ್ತ್ರೀವಾದಿ ದೃಷ್ಟಿಯ ಹೊಸ ಸಾಹಿತ್ಯ ಸೃಷ್ಟಿಗೂ ಪ್ರೇರಣೆ ನೀಡಿದ್ದಾರೆ ಎಂದು ಹೇಳಿದರು.