ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಷಣೆ ನಿಲ್ಲದೆ, ಸ್ತ್ರೀವಾದ ನಿಲ್ಲದು: ಸಾಹಿತಿ ಎಲ್.ಜಿ.ಮೀರಾ ಅಭಿಪ್ರಾಯ

Published 7 ಮೇ 2024, 13:52 IST
Last Updated 7 ಮೇ 2024, 13:52 IST
ಅಕ್ಷರ ಗಾತ್ರ

ತುಮಕೂರು: ಮಹಿಳೆ ಮೇಲಿನ ಎಲ್ಲಾ ಬಗೆಯ ಶೋಷಣೆಗಳನ್ನು ವಿರೋಧಿಸುವ ಗಂಡಸರೂ ಸ್ತ್ರೀವಾದಿಗಳೇ ಆಗಿದ್ದಾರೆ. ಮಹಿಳೆ ಮೇಲಿನ ಶೋಷಣೆ ನಿಲ್ಲುವವರೆಗೂ ಸ್ತ್ರೀವಾದ ಪ್ರಸ್ತುತವಾಗಿರುತ್ತದೆ ಎಂದು ಸಾಹಿತಿ ಎಲ್.ಜಿ.ಮೀರಾ ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾಲಯ ಡಾ.ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ ಈಚೆಗೆ ಆಯೋಜಿಸಿದ್ದ ‘ಸ್ತ್ರೀವಾದಿ ಸಾಹಿತ್ಯ ವಿಮರ್ಶೆಯ ನೂತನ ಹೊಳಹುಗಳು’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ತ್ರೀವಾದ ಪಶ್ಚಿಮಕ್ಕಷ್ಟೇ ಸೀಮಿತವಾಗಿಲ್ಲ. ಇದರ ಅನೇಕ ಬೇರುಗಳನ್ನು ವಚನ ಸಾಹಿತ್ಯದಲ್ಲಿ, ಬುದ್ಧ, ಗಾಂಧಿ, ಅಂಬೇಡ್ಕರ್ ಚಿಂತನೆಗಳಲ್ಲಿ ಕಾಣಬಹುದು. ಭಾರತಕ್ಕೇ ವಿಶಿಷ್ಟವಾದ ಸ್ತ್ರೀವಾದವನ್ನು ರೂಪಿಸುವಲ್ಲಿ ಅನೇಕ ಚಿಂತಕಿಯರು ಶ್ರಮಿಸಿದ್ದಾರೆ ಎಂದು ತಿಳಿಸಿದರು.

ಪಶ್ಚಿಮದಲ್ಲಿ ಸ್ತ್ರೀವಾದ ಹಾದು ಬಂದ ಘಟ್ಟಗಳನ್ನು ಪರಿಚಯಿಸುತ್ತ, ಕನ್ನಡದಲ್ಲಿ ಮಹಿಳಾ ಸಾಹಿತ್ಯ ಮತ್ತು ವಿಮರ್ಶೆಯ ಚರಿತ್ರೆಯ ಮೇಲೆ ಬೆಳಕು ಚೆಲ್ಲಿದರು. ಅಲಕ್ಷ್ಯಕ್ಕೆ ಒಳಗಾಗಿದ್ದ ಲೇಖಕಿಯರ ಬರಹಗಳನ್ನು ಎನ್.ಗಾಯತ್ರಿ, ವಿಜಯಾ ದಬ್ಬೆ ಮುಂತಾದ ವಿಮರ್ಶಕಿಯರು ಮರು ಶೋಧಿಸಿ, ಚರ್ಚಿಸಿದ್ದಾರೆ. ಅಲ್ಲದೆ, ಕನ್ನಡ ಸಾಹಿತ್ಯವನ್ನು ಸ್ತ್ರೀವಾದಿ ಓದಿಗೆ ಒಳಪಡಿಸಿ, ಸ್ತ್ರೀವಾದಿ ದೃಷ್ಟಿಯ ಹೊಸ ಸಾಹಿತ್ಯ ಸೃಷ್ಟಿಗೂ ಪ್ರೇರಣೆ ನೀಡಿದ್ದಾರೆ ಎಂದು ಹೇಳಿದರು.

ವಿ.ವಿ ಡಾ.ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ನಿತ್ಯಾನಂದ ಬಿ.ಶೆಟ್ಟಿ, ಪ್ರಾಧ್ಯಾಪಕರಾದ ಅಣ್ಣಮ್ಮ, ಪಿ.ಎಂ.ಗಂಗಾಧರಯ್ಯ, ಸಹ ಪ್ರಾಧ್ಯಾಪಕಿ ಗೀತಾ ವಸಂತ, ಸಾಹಿತಿಗಳಾದ ರವಿಕುಮಾರ್ ನೀಹ, ಗುರುಪ್ರಸಾದ್ ಕಂಟಲಗೆರೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT