‘ನಾನು ಕೇಂದ್ರ ಸಚಿವನಾಗಿರುವುದಕ್ಕೆ ಬಸವಣ್ಣ, ಲಿಂ.ಡಾ.ಶಿವಕುಮಾರ ಸ್ವಾಮೀಜಿ ಅವರ ಆದರ್ಶ ಪಾಲಿಸಿರುವುದೇ ಕಾರಣವಾಗಿದೆ. ಯಶಸ್ಸು ಸಿಕ್ಕ ಸಮಯದಲ್ಲಿ ಸಮಾಜ ಸನ್ಮಾನಿಸುತ್ತದೆ. ನಮ್ಮ ಊರಿನಲ್ಲಿ, ಓದಿದ ಸಂಸ್ಥೆಯಲ್ಲಿ ಸಿಗುವ ಸನ್ಮಾನ ಎಲ್ಲಕ್ಕಿಂತ ಮಹತ್ವ ಎನಿಸುತ್ತದೆ. ಈಗ ಸಚಿವನಾಗಿದ್ದು, ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಕಪ್ಪು ಚುಕ್ಕೆ ಬಾರದಂತೆ ಕೆಲಸ ನಿರ್ವಹಿಸುತ್ತೇನೆ. ಉತ್ತಮ ಕೆಲಸ ಮಾಡಿ ತೋರಿಸುತ್ತೇನೆ’ ಎಂದು ಭರವಸೆ ನೀಡಿದರು.