ಸಮಾಜಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಮುನಿರಾಜು, ‘ಬೆಳಗಾವಿ ಹಾಗೂ ಧಾರವಾಡದಲ್ಲಿ ಓಡಾಡಿದ ಅಂಬೇಡ್ಕರ್ ಈ ಪ್ರದೇಶವನ್ನು ಪೂಣ್ಯಭೂಮಿಯನ್ನಾಗಿಸಿದ್ದಾರೆ. ಹಿಂಸೆ ದ್ವೇಷಿಸುತ್ತಾ ಅಹಿಂಸಾ ಮಾರ್ಗದಲ್ಲಿ ಸ್ವತಂತ್ರ, ಸಮಾನತೆ ಪಡೆದುಕೊಳ್ಳಬೇಕು. ಶೋಷಣೆಮುಕ್ತ ಬದುಕು ಕಟ್ಟಿಕೊಳ್ಳಬೇಕೆಂದು ತೋರಿಸಿಕೊಟ್ಟವರು’ ಎಂದು ಸ್ಮರಿಸಿದರು.ಪ್ರೊ.ಸಾಬಣ್ಣ ತಳವಾರ, ಪ್ರೊ.ವಿನೋದ ಗಾಯಕವಾಡ ಮತ್ತು ಪ್ರೊ.ಎಸ್.ಒ. ಹಲಸಗಿ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿಗಳು ನಡೆದವು. ಪ್ರೊ.ಲಿಂಗಪ್ಪ ಗೋನಾಳ, ಪ್ರೊ.ಆನಂದ ಮೆನಸೆ, ಪ್ರೊ.ಸುನೀತಾ ಸಾಗೋಲೆ, ಪ್ರೊ.ಶೀಲಾಧರ ಮುಗಳಿ, ಪ್ರೊ.ಎಚ್.ಬಿ. ಕೋಲಕಾರ ಮಾತನಾಡಿದರು.