<p>ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ದಬ್ಬೇಗಟ್ಟದಲ್ಲಿ ಅಗ್ನಿಕೊಂಡ ಹಾಯುವಾಗ ದೇವರನ್ನು ಹೊತ್ತಿದ್ದವರು ಮುಗ್ಗರಿಸಿದ ಪರಿಣಾಮ ಕೆಂಡದಲ್ಲಿ ಬಿದ್ದು, ದೇವರನ್ನು ನಿಗಿನಿಗಿ ಕೆಂಡದಲ್ಲೇ ಬಿಟ್ಟು ಓಡಿದ ಘಟನೆ ಮಂಗಳವಾರ ನಡೆದಿದೆ.<br /> <br /> ಗಂಗಾಸ್ನಾನ ಮುಗಿಸಿ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ದೇವರನ್ನು ಕರೆತರಲಾಯಿತು. ಮಧ್ಯಾಹ್ನ 3ಗಂಟೆಗೆ ಭಕ್ತರ ಹರ್ಷೋದ್ಗಾರದೊಂದಿಗೆ ಅಗ್ನಿಕೊಂಡ ಹಾಯುವ ಪ್ರಕ್ರಿಯೆಗೆ ಚಾಲನೆ ನಿಡಲಾಯಿತು.<br /> <br /> ಕೆಂಡ ಹಾಯುವಾಗ ಮುಂಬದಿಯಲ್ಲಿ ಪಲ್ಲಕ್ಕಿ ಹೊತ್ತಿದ್ದ ಸೋಮಶೇಖರ್ ಎಂಬಾತ ಮುಗ್ಗರಿಸಿ ಕೆಂಡದಲ್ಲಿ ಬಿದ್ದರು. ತಕ್ಷಣ ಹಿಂಬದಿಯಲ್ಲಿದ್ದ ಗೋವಿಂದರಾಜ್ ಕೂಡ ಆಯತಪ್ಪಿ ಬಿದ್ದರು. ಇಬ್ಬರೂ ದೇವರನ್ನು ಅಗ್ನಿ ಕೊಂಡದಲ್ಲೇ ಬಿಟ್ಟು ಹೊರಗೆ ಓಡಿದರು. ಈ ಘಟನೆಯಿಂದ ನೆರೆದಿದ್ದ ಭಕ್ತಸ್ತೋಮ ಕ್ಷಣ ಕಾಲ ದಂಗಾಯಿತು!<br /> <br /> ದೇವರನ್ನು ಕೆಂಡದಲ್ಲೇ ಬಿಟ್ಟು ಓಡಿದ್ದರಿಂದ ಪಲ್ಲಕ್ಕಿ ಹೊತ್ತಿದ್ದವರು ಪ್ರಾಣಾಪಾಯದಿಂದ ಪಾರಾದರು. ನಂತರ ಭಕ್ತರು ಹೊರಗಿನಿಂದ ಪಲ್ಲಕ್ಕಿ ಸಮೇತ ದೇವರನ್ನು ಕೆಂಡದಿಂದ ಹೊರಗೆ ಎಳೆದುಕೊಂಡರು. ಇಬ್ಬರಿಗೂ ಗಂಭೀರ ಸುಟ್ಟಗಾಯಗಳಾಗಿದ್ದು, ತಕ್ಷಣ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.<br /> <br /> ಎರಡು ಶತಮಾನದ ಇತಿಹಾಸ ಹೊಂದಿರುವ ದಬ್ಬೇಘಟ್ಟ ಮರುಳಸಿದ್ದೇಶ್ವರ ಜಾತ್ರೆ ತಾಲ್ಲೂಕಿನ ಪ್ರಸಿದ್ದ ಜಾತ್ರೆಗಳಲ್ಲಿ ಒಂದು. ಅದರಲ್ಲೂ ಜಾತ್ರೆಯ ಪ್ರಮುಖ ಘಟ್ಟವಾದ ದೇವರು ಕೆಂಡ ಹಾಯುವುದನ್ನು ನೋಡಲು ಜನ ಕಿಕ್ಕಿರಿದು ಸೇರುತ್ತಾರೆ. ಈ ಬಾರಿ ಆರು ಟ್ರ್ಯಾಕ್ಟರ್ ಲೋಡು ಒಣ ಸೌದೆ ಸುಟ್ಟು 15 ಚದರಡಿ ವಿಸ್ತೀರ್ಣದಲ್ಲಿ ಕೆಂಡ ಹರಡಲಾಗಿತ್ತು. ಇದೇ ಮೊದಲ ಬಾರಿಗೆ ಈ ಅವಘಡ ಸಂಭವಿಸಿದ್ದರಿಂದ ಭಕ್ತರು ಕಳವಳಕ್ಕೀಡಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ದಬ್ಬೇಗಟ್ಟದಲ್ಲಿ ಅಗ್ನಿಕೊಂಡ ಹಾಯುವಾಗ ದೇವರನ್ನು ಹೊತ್ತಿದ್ದವರು ಮುಗ್ಗರಿಸಿದ ಪರಿಣಾಮ ಕೆಂಡದಲ್ಲಿ ಬಿದ್ದು, ದೇವರನ್ನು ನಿಗಿನಿಗಿ ಕೆಂಡದಲ್ಲೇ ಬಿಟ್ಟು ಓಡಿದ ಘಟನೆ ಮಂಗಳವಾರ ನಡೆದಿದೆ.<br /> <br /> ಗಂಗಾಸ್ನಾನ ಮುಗಿಸಿ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ದೇವರನ್ನು ಕರೆತರಲಾಯಿತು. ಮಧ್ಯಾಹ್ನ 3ಗಂಟೆಗೆ ಭಕ್ತರ ಹರ್ಷೋದ್ಗಾರದೊಂದಿಗೆ ಅಗ್ನಿಕೊಂಡ ಹಾಯುವ ಪ್ರಕ್ರಿಯೆಗೆ ಚಾಲನೆ ನಿಡಲಾಯಿತು.<br /> <br /> ಕೆಂಡ ಹಾಯುವಾಗ ಮುಂಬದಿಯಲ್ಲಿ ಪಲ್ಲಕ್ಕಿ ಹೊತ್ತಿದ್ದ ಸೋಮಶೇಖರ್ ಎಂಬಾತ ಮುಗ್ಗರಿಸಿ ಕೆಂಡದಲ್ಲಿ ಬಿದ್ದರು. ತಕ್ಷಣ ಹಿಂಬದಿಯಲ್ಲಿದ್ದ ಗೋವಿಂದರಾಜ್ ಕೂಡ ಆಯತಪ್ಪಿ ಬಿದ್ದರು. ಇಬ್ಬರೂ ದೇವರನ್ನು ಅಗ್ನಿ ಕೊಂಡದಲ್ಲೇ ಬಿಟ್ಟು ಹೊರಗೆ ಓಡಿದರು. ಈ ಘಟನೆಯಿಂದ ನೆರೆದಿದ್ದ ಭಕ್ತಸ್ತೋಮ ಕ್ಷಣ ಕಾಲ ದಂಗಾಯಿತು!<br /> <br /> ದೇವರನ್ನು ಕೆಂಡದಲ್ಲೇ ಬಿಟ್ಟು ಓಡಿದ್ದರಿಂದ ಪಲ್ಲಕ್ಕಿ ಹೊತ್ತಿದ್ದವರು ಪ್ರಾಣಾಪಾಯದಿಂದ ಪಾರಾದರು. ನಂತರ ಭಕ್ತರು ಹೊರಗಿನಿಂದ ಪಲ್ಲಕ್ಕಿ ಸಮೇತ ದೇವರನ್ನು ಕೆಂಡದಿಂದ ಹೊರಗೆ ಎಳೆದುಕೊಂಡರು. ಇಬ್ಬರಿಗೂ ಗಂಭೀರ ಸುಟ್ಟಗಾಯಗಳಾಗಿದ್ದು, ತಕ್ಷಣ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.<br /> <br /> ಎರಡು ಶತಮಾನದ ಇತಿಹಾಸ ಹೊಂದಿರುವ ದಬ್ಬೇಘಟ್ಟ ಮರುಳಸಿದ್ದೇಶ್ವರ ಜಾತ್ರೆ ತಾಲ್ಲೂಕಿನ ಪ್ರಸಿದ್ದ ಜಾತ್ರೆಗಳಲ್ಲಿ ಒಂದು. ಅದರಲ್ಲೂ ಜಾತ್ರೆಯ ಪ್ರಮುಖ ಘಟ್ಟವಾದ ದೇವರು ಕೆಂಡ ಹಾಯುವುದನ್ನು ನೋಡಲು ಜನ ಕಿಕ್ಕಿರಿದು ಸೇರುತ್ತಾರೆ. ಈ ಬಾರಿ ಆರು ಟ್ರ್ಯಾಕ್ಟರ್ ಲೋಡು ಒಣ ಸೌದೆ ಸುಟ್ಟು 15 ಚದರಡಿ ವಿಸ್ತೀರ್ಣದಲ್ಲಿ ಕೆಂಡ ಹರಡಲಾಗಿತ್ತು. ಇದೇ ಮೊದಲ ಬಾರಿಗೆ ಈ ಅವಘಡ ಸಂಭವಿಸಿದ್ದರಿಂದ ಭಕ್ತರು ಕಳವಳಕ್ಕೀಡಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>