<p><strong>ತುರುವೇಕೆರೆ: </strong>ತಾಲ್ಲೂಕಿನ ತಾಳಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡೊಂಕಿಹಳ್ಳಿಗೊಲ್ಲರಹಟ್ಟಿ ಗ್ರಾಮಕ್ಕೆ ಹಲವು ತಿಂಗಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಜನರು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ ಎಂದು ಗ್ರಾಮಸ್ಥರು ದೂರಿದರು.</p>.<p>ಗೊಲ್ಲರಹಟ್ಟಿಯಲ್ಲಿ 1 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ದಿದೆ. ಆದರೆ ಕೇವಲ ಒಂದು ಕೊಳವೆ ಬಾವಿ ಮಾತ್ರ ಇದೆ. ಆರೇಳು ಸಿಸ್ಟನ್ ಇದ್ದರೂ ಕೆಲ ತಿಂಗಳಿನಿಂದ ಕೊಳವೆ ಬಾವಿಯಲ್ಲಿ ಸಮರ್ಪಕವಾಗಿ ನೀರು ಬರುತ್ತಿಲ್ಲ. ಇದರಿಂದ ನೀರಿಗೆ ಪಡಿಪಾಟಲು ಬೀಳುವಂತ ಸ್ಥಿತಿ ಬಂದಿದೆ.</p>.<p> ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಒ ಹಾಗೂ ತಾಲ್ಲೂಕು ಪಂಚಾಯಿತಿ ಇ.ಒ ಅವರಿಗೂ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ದೂರು ನೀಡಿದರೂ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ. ಸಮಸ್ಯೆ ಕೇಳುವ ಅಧಿಕಾರಿಗಳು ಮಾತ್ರ ಸಮಸ್ಯೆ ನಿಯಂತ್ರಣಕ್ಕೆ ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ಅವಲತ್ತುಕೊಂಡರು.</p>.<p>ಗ್ರಾಮದ ಮುಖಂಡ ಪರಮೇಶ ಮಾತನಾಡಿ, ಗ್ರಾಮದಲ್ಲಿರುವ ಜನರು ಕುಡಿಯುವ ನೀರನ್ನು ತರಲು ಹರಸಾಹಸ ಪಡುತ್ತಾರೆ. ಇದಾಗ್ಯೂ ಗ್ರಾಮ ಪಂಚಾಯಿತಿಯ ಅಧಿಕಾರಿಗುಳು ಮಾತ್ರ ಕುಡಿಯುವ ನೀರು ಪೂರೈಸದೆ ಕೇವಲ ಸಬೂಬು ಹೇಳುತ್ತಾರೆ ಎನ್ನುವುದು ಜನರ ಆರೋಪ.</p>.<p>ಪ್ರತಿ ದಿನ ಎರಡು ಬಿಂದಿಗೆ ನೀರು ಹಿಡಿಯಲು ಗಂಟೆಗಟ್ಟಲೇ ನಿಲ್ಲಬೇಕಿದೆ. ಒಂದು ಕಿ.ಮೀ ದೂರದ ಜಮೀನುಗಳಿಗೆ ತೆರಳಿದರೂ ನೀರು ಸಿಗುತ್ತಿಲ್ಲ. ಶ್ರೀಘ್ರವೇ ನಮ್ಮ ಗ್ರಾಮಕ್ಕೆ ಸಮರ್ಪಕ ನೀರು ನೀಡಬೇಕು ಎಂದು ಮಂಜುಳಾ ಒತ್ತಾಯಿಸಿದರು.</p>.<p>ಪಿಡಿಒ ಸೋಮಶೇಖರ್ ಮಾತನಾಡಿ, ಈ ಬಗ್ಗೆ ಈಗಾಗಲೇ ಹೊಸ ಕೊಳವೆಬಾವಿ ಕೊರೆಯಿಸಲಾಗಿದೆ. ಕಾಮಗಾರಿ ಪೂರೈಸಿದ ನಂತರ ನಮ್ಮ ಸುಪರ್ದಿಗೆ ನೀಡಲಿದ್ದಾರೆ. ಸದ್ಯಕ್ಕೆ ಟ್ಯಾಂಕ್ ಮೂಲಕ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುರುವೇಕೆರೆ: </strong>ತಾಲ್ಲೂಕಿನ ತಾಳಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡೊಂಕಿಹಳ್ಳಿಗೊಲ್ಲರಹಟ್ಟಿ ಗ್ರಾಮಕ್ಕೆ ಹಲವು ತಿಂಗಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಜನರು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ ಎಂದು ಗ್ರಾಮಸ್ಥರು ದೂರಿದರು.</p>.<p>ಗೊಲ್ಲರಹಟ್ಟಿಯಲ್ಲಿ 1 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ದಿದೆ. ಆದರೆ ಕೇವಲ ಒಂದು ಕೊಳವೆ ಬಾವಿ ಮಾತ್ರ ಇದೆ. ಆರೇಳು ಸಿಸ್ಟನ್ ಇದ್ದರೂ ಕೆಲ ತಿಂಗಳಿನಿಂದ ಕೊಳವೆ ಬಾವಿಯಲ್ಲಿ ಸಮರ್ಪಕವಾಗಿ ನೀರು ಬರುತ್ತಿಲ್ಲ. ಇದರಿಂದ ನೀರಿಗೆ ಪಡಿಪಾಟಲು ಬೀಳುವಂತ ಸ್ಥಿತಿ ಬಂದಿದೆ.</p>.<p> ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಒ ಹಾಗೂ ತಾಲ್ಲೂಕು ಪಂಚಾಯಿತಿ ಇ.ಒ ಅವರಿಗೂ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ದೂರು ನೀಡಿದರೂ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ. ಸಮಸ್ಯೆ ಕೇಳುವ ಅಧಿಕಾರಿಗಳು ಮಾತ್ರ ಸಮಸ್ಯೆ ನಿಯಂತ್ರಣಕ್ಕೆ ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ಅವಲತ್ತುಕೊಂಡರು.</p>.<p>ಗ್ರಾಮದ ಮುಖಂಡ ಪರಮೇಶ ಮಾತನಾಡಿ, ಗ್ರಾಮದಲ್ಲಿರುವ ಜನರು ಕುಡಿಯುವ ನೀರನ್ನು ತರಲು ಹರಸಾಹಸ ಪಡುತ್ತಾರೆ. ಇದಾಗ್ಯೂ ಗ್ರಾಮ ಪಂಚಾಯಿತಿಯ ಅಧಿಕಾರಿಗುಳು ಮಾತ್ರ ಕುಡಿಯುವ ನೀರು ಪೂರೈಸದೆ ಕೇವಲ ಸಬೂಬು ಹೇಳುತ್ತಾರೆ ಎನ್ನುವುದು ಜನರ ಆರೋಪ.</p>.<p>ಪ್ರತಿ ದಿನ ಎರಡು ಬಿಂದಿಗೆ ನೀರು ಹಿಡಿಯಲು ಗಂಟೆಗಟ್ಟಲೇ ನಿಲ್ಲಬೇಕಿದೆ. ಒಂದು ಕಿ.ಮೀ ದೂರದ ಜಮೀನುಗಳಿಗೆ ತೆರಳಿದರೂ ನೀರು ಸಿಗುತ್ತಿಲ್ಲ. ಶ್ರೀಘ್ರವೇ ನಮ್ಮ ಗ್ರಾಮಕ್ಕೆ ಸಮರ್ಪಕ ನೀರು ನೀಡಬೇಕು ಎಂದು ಮಂಜುಳಾ ಒತ್ತಾಯಿಸಿದರು.</p>.<p>ಪಿಡಿಒ ಸೋಮಶೇಖರ್ ಮಾತನಾಡಿ, ಈ ಬಗ್ಗೆ ಈಗಾಗಲೇ ಹೊಸ ಕೊಳವೆಬಾವಿ ಕೊರೆಯಿಸಲಾಗಿದೆ. ಕಾಮಗಾರಿ ಪೂರೈಸಿದ ನಂತರ ನಮ್ಮ ಸುಪರ್ದಿಗೆ ನೀಡಲಿದ್ದಾರೆ. ಸದ್ಯಕ್ಕೆ ಟ್ಯಾಂಕ್ ಮೂಲಕ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>