ನಾಮಪತ್ರ ಸಲ್ಲಿಕೆಗೂ ಮುನ್ನ ರೈತ ಮಹಿಳೆಯರ ಪೂರ್ಣಕುಂಭದೊಂದಿಗೆ ಮೆರವಣಿಗೆಯಲ್ಲಿ ಬಂದರು. ’ಕಾಂಗ್ರೆಸ್ ಅಭ್ಯರ್ಥಿ ಕನಕಪುರದ ಸಹೋದರರ ಆಜ್ಞಾಪಾಲಕಾರಾಗಿದ್ದಾರೆ. ಜೆಡಿಎಸ್ ತಾಲ್ಲೂಕಿನಲ್ಲೂ ಅಪ್ಪ ಮಕ್ಕಳ ಪಕ್ಷವಾಗಿದೆ. ಬಿಜೆಪಿ ಸಹ ಸಹೋದರನನ್ನು ಅನುಕರಣೆ ಮಾಡಿ ಅಧಿಕಾರಕ್ಕಾಗಿ ಮಾತ್ರವೇ ಹೊರತು ಅಭಿವೃದ್ಧಿಗಾಗಿ ಅಲ್ಲ. ತಾಲ್ಲೂಕಿನ ನೀರಾವರಿ, ರೈತ ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟ ಮಾಡುತ್ತಿರುವ ರೈತ ಸಂಘಕ್ಕೆ ಅವಕಶ ಮಾಡಿಕೊಡಿ’ ಎಂದು ಮನವಿ ಮಾಡಿದರು