ಉಡುಪಿ: ಮಣಿಪಾಲದ ಶೀಂಬ್ರಾ ಸೇತುವೆ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ ಮೂವರ ವಿರುದ್ಧ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಚೆರಿಯನ್ ಅಬ್ರಾಹಂ, ಜೊಯಲ್ ಜಾನ್ಸನ್, ಮ್ಯಾಥಿವ್ ಆರೋಪಿಗಳಾಗಿದ್ದು ಮೂವರನ್ನು ಮಣಿಪಾಲದ ಕೆಎಂಸಿ ಫೊರೆನ್ಸಿಕ್ ವಿಭಾಗದಲ್ಲಿ ಪರೀಕ್ಷೆಗೊಳಪಡಿಸಲಾಗಿದ್ದು ಗಾಂಜಾ ಸೇವನೆ ದೃಢಪಟ್ಟಿದೆ ಎಂದು ಮಣಿಪಾಲ ಠಾಣೆ ಪೊಲೀಸರು ತಿಳಿಸಿದ್ದಾರೆ.
ಕಳವು
ಉಡುಪಿ: ಹಯಗ್ರೀವ ನಗರ 7ನೇ ಕ್ರಾಸ್ನಲ್ಲಿರುವ ಡಾ.ಮಂಜುನಾಥ ಭಟ್ಟ ಎಂಬುವರ ಮನೆಯಲ್ಲಿ ಕಳವು ನಡೆದಿದೆ. ಕಪಾಟಿನಲ್ಲಿದ್ದ ₹ 20 ಸಾವಿರ ಮೌಲ್ಯದ ಚಿನ್ನದ ಉಂಗುರ, ₹ 4000 ನಗದು ಕಳವು ಮಾಡಲಾಗಿದೆ.