ಮಧ್ವಮಂಟಪದಲ್ಲಿ ಮಂಟಪದಲ್ಲಿ ವಿವಿಧ ತಂಡಗಳಿಂದ ಭಜನೆ, ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಬಳಗದಿಂದ ಭಕ್ತಿಗಾನ ಸುಧೆ, ರಾಜಾಂಗಣದಲ್ಲಿ ಪಡುಬಿದ್ರಿ ಚಂದ್ರಕಾಂತ ಬಳಗದದಿಂದ ಸುಗಮ ಸಂಗೀತ, ಪುತ್ತಿಗೆ ಚಂದ್ರಶೇಖರ್ ಅವರ ಸ್ಯಾಕ್ಸೋಫೋಣ್ ವಾದನ ನಡೆಯಿತು. ಬಳಿಕ ಆಕರ್ಷಕ ಸುಡುಮದ್ದು ಪ್ರದರ್ಶನ, ಬ್ರಹ್ಮರಥ, ಸ್ವರ್ಣರಥ, ನವರತ್ನರಥ ಸೇವೆ ಜರಗಿತು.