ದೂಳು ಎಂದರೆ ಅದು ಸಾಮಾನ್ಯವಲ್ಲ, ಅದಕ್ಕೂ ಈಗ ಮಹತ್ವ ಇದೆ ಎಂಬುದನ್ನು ಈ ನಗರ ಸಾಬೀತುಪಡಿಸಿದೆ. ಸಣ್ಣದೊಂದು ಗಾಳಿ ಬೀಸಿದರೂ ಮುಂದೆ ದಾರಿಯೇ ಕಾಣದಂತೆ ದೂಳು ಏಳುವುದರಿಂದ ರಸ್ತೆಗಳಲ್ಲಿ ವಾಹನದ ದೀಪ ಬೆಳಗಿಸಿಯೇ ಸಂಚರಿಸಬೇಕಾದ ಅನಿವಾರ್ಯತೆ ಇಲ್ಲಿದೆ. ಇದನ್ನೇ ರಾಜಕೀಯ ಪಕ್ಷಗಳು ಬಂಡವಾಳ ಮಾಡಿಕೊಂಡು ಮಾಸ್ಕ್ಗಳನ್ನು ಧರಿಸಿಕೊಂಡು ಪ್ರಚಾರಕ್ಕೆ ಇಳಿದಿವೆ.