ತಿರುಪತಿ: ತಿರುಮಲದಲ್ಲಿರುವ ‘ವೆಂಕಟೇಶ್ವರ ಟ್ರಸ್ಟ್’ಗೆ ಮಲೇಷ್ಯಾದ ಭಕ್ತ ಕೆವಿನ್ ಸುಕುಮಾರನ್ ₹1 ಕೋಟಿ ದೇಣಿಗೆ ನೀಡಿದ್ದಾರೆ.
ಟ್ರಸ್ಟ್ ವತಿಯಿಂದ ‘ಪ್ರಾಣದಾನ’ ಹೆಸರಿನ ಸುಸಜ್ಜಿತ ಆಸ್ಪತ್ರೆ ಸ್ಥಾಪನೆ ಮಾಡಲಾಗಿದೆ. ಇಲ್ಲಿ ಬಡ ಜನರಿಗೆ ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಈ ಕಾರ್ಯಕ್ಕೆ ತಮ್ಮ ಹಣವನ್ನು ಮೀಸಲು ಇಡುವಂತೆ ಕೆವಿನ್ ಕೋರಿದ್ದಾರೆ.