ಡಾ. ಆಶಿತ್ ಮತ್ತು ರಜತ್ ಸಹೋದರರು, ಮುಂಬೈಯಲ್ಲಿ ದೊಡ್ಡ ಉದ್ಯಮಿಯಾಗಿರುವ ಬಡಾಬೈಲ್ ರತ್ನಾಕರ ಶೆಟ್ಟಿ ಅವರ ಮಕ್ಕಳು. ಡಾ. ರಚನಾ, ಇತ್ತೀಚೆಗಷ್ಟೆ ನಿಧನರಾಗಿರುವ ಮುಂಬೈಯಲ್ಲಿ ದೊಡ್ಡ ಹೋಟೆಲ್ ಉದ್ಯಮಿಯಾಗಿದ್ದ ಮರಾಠ ಸುರೇಶ್ ಶೆಟ್ಟಿ ಅವರ ಮಗಳು. ಡಾ. ನಿವೇದಿತಾ ಕುಂದಾಪುರದ ಹವಾಲ್ದಾರ್ ಕುಟುಂಬದವರು. ಆರ್ಥಿಕ ಅಗತ್ಯ ಅವರನ್ನು ಇಲ್ಲಿಗೆ ಕರೆತಂದಿದ್ದಲ್ಲ, ಬದಲಾಗಿ ಅವರ ಸೇವಾ ಮನೋಭಾವ ಈ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸಿದೆ.