ಉಡುಪಿ: ಉದ್ಯಾವರದ ಸಂಪಿಗೆ ನಗರದ ಮಾಂಗೋಡು ದೇವಸ್ಥಾನದ ಬಳಿ 35 ಅಡಿ ಆಳವಾದ ಬಾವಿಗೆ ಬಿದ್ದು ಪ್ರಾಣಾಪಾಯಕ್ಕೆ ಸಿಲುಕಿದ ವ್ಯಕ್ತಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ.
ಬಾವಿಯ ಬಳಿ ಓಡಾಡುವಾಗ ಸ್ಥಳೀಯ ನಿವಾಸಿ ಶಶೀಂದ್ರ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದರು. ಬಾವಿಯ ಅಗಲ ಕಡಿಮೆ ಇದ್ದ ಕಾರಣ ಬಿದ್ದ ರಭಸಕ್ಕೆ ಶಶೀಂದ್ರ ಅವರ ಕಾಲಿಗೆ ಬಲವಾದ ಪೆಟ್ಟಾಗಿ, ನೆರವಿಗೆ ಧಾವಿಸುವಂತೆ ಅಂಗಲಾಚಿದ್ದಾರೆ.
ಕೂಡಲೇ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದು ಸ್ಥಳಕ್ಕೆ ಆಮಿಸಿದ ಸಿಬ್ಬಂದಿ ಹಗ್ಗದ ಸಹಾಯದಿಂದ ಶಶೀಂದ್ರ ಅವರನ್ನು ಮೇಲಕ್ಕೆತ್ತಿದ್ದಾರೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ರವಿನಾಯ್ಕ, ರಾಘವೇಂದ್ರ ಆಚಾರಿ, ತೌಸಿಫ್, ಮುಸಿದ್ದೀಕ್ ಹಾಗೂ ಗಣೇಶ್ ಇದ್ದರು.