ಜಗತ್ತು ಭಾರತವನ್ನು ಗುರುತಿಸುವುದು ಆಧ್ಯಾತ್ಮದ ದೃಷ್ಟಿಯಿಂದ. ಆಧ್ಯಾತ್ಮ ದೇಶದ ಮೂಲವಾಗಿದ್ದು, ಮುಂದೆ ಜಗತ್ತಿನ ನೇತೃತ್ವ ಪಡೆಯಲು ಭಾರತಕ್ಕೆ ಉಜ್ವಲ ಹಾಗೂ ವಿಫುಲ ಅವಕಾಶಗಳಿವೆ. ರಾಮಾನುಜಾಚಾರ್ಯ, ಬಸವಣ್ಣನವರಂತಹ ಧಾರ್ಮಿಕ ನೇತಾರರ ಹೆಸರನ್ನು ಸಮೀಪದ ವಿಮಾನ ನಿಲ್ದಾಣಗಳಿಗೆ ಇಡಬೇಕು ಎಂದು ಪುತ್ತಿಗೆ ಮಠದ ಶ್ರೀಗಳು ಆಗ್ರಹಿಸಿದ್ದಾರೆ.