<p><strong>ಉಡುಪಿ:</strong> ಅನೀತಿ ಕಂಡರೆ ಸಿಡಿದೆದ್ದು ಪ್ರತಿಭಟಿಸುತ್ತಿದ್ದ ಪಟ್ಟಾಭಿರಾಮ ಸೋಮಯಾಜಿ ಅವರು ಏಕಾಂಗಿಯಾಗಿಯೇ ಸಾಮಾಜಿಕ ಜವಾಬ್ದಾರಿಯನ್ನು ಹೆಗಲಲ್ಲಿ ಹೊತ್ತುಕೊಳ್ಳುತ್ತಿದ್ದರು ಎಂದು ಸಾಹಿತಿ ಚ.ಸರ್ವಮಂಗಳ ಹೇಳಿದರು.</p>.<p>ಅಪರಾಜಿತೆ ಪ್ರಕಾಶನ ಮೈಸೂರು ಹಾಗೂ ಪಟ್ಟಾಭಿರಾಮ ಸೋಮಯಾಜಿ ಅವರ ಸ್ನೇಹಿತರ ಬಳಗದ ಸಹಯೋಗದಲ್ಲಿ ನಗರದ ಎಂಜಿಎಂ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪಟ್ಟಾಭಿರಾಮ ಸೋಮಯಾಜಿ ಅವರ ಕವನ ಸಂಕಲನ ‘ಆ್ಯನ್ ಆಲ್ಫಾಬೆಟಿಕಲ್ ಆಲ್ಟರ್ಕೇಶನ್’ ಬಿಡುಗಡೆ ಹಾಗೂ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಅನೀತಿಯ ವಿರುದ್ಧ ಹೋರಾಡಿದ್ದಕ್ಕೆ ಅವರನ್ನು ನಕ್ಸಲ್, ಅರ್ಬನ್ ನಕ್ಸಲ್ ಎಂದು ಕರೆದರು. ಸದಾ ಹಿಂಸೆಯನ್ನು ವಿರೋಧಿಸುತ್ತಿದ್ದ ಅವರು ನಕ್ಸಲ್ ಆಗಲು ಸಾಧ್ಯವಿಲ್ಲ ಎಂದರು.</p>.<p>ಪಟ್ಟಾಭಿರಾಮ ಅವರು ಎಲ್ಲರ ಜೊತೆ ಸೈದ್ಧಾಂತಿಕವಾಗಿ ಹತ್ತಿರವಾಗುತ್ತಿದ್ದರು. ಆದರೆ ಇಸಂಗಳು, ಜಾತಿ ಪರ ಒಲವು ಇರುವವರು ಬಂದಾಗ ಅವರಿಂದ ದೂರವಿರುತ್ತಿದ್ದರು ಮತ್ತು ಸದಾ ಒಳಮುಖವಾಗಿಯೇ ಇರುತ್ತಿದ್ದರು ಎಂದು ಹೇಳಿದರು.</p>.<p>ಎಲ್ಲೆಲ್ಲಿ ಆಡಳಿತದ ಕಪಿಮುಷ್ಟಿ ಇತ್ತೊ ಅಲ್ಲಿ ಪಟ್ಟಾಭಿರಾಮ ಅವರು ನಾಗರ ಹಾವಿನಂತೆ ಬುಸ್, ಬುಸ್ ಎನ್ನುತ್ತಿದ್ದರು. ಆದರೆ ಯಾರಿಗೂ ಕೆಡುಕು ಮಾಡಿದ ವ್ಯಕ್ತಿಯಲ್ಲ ಎಂದು ಬಣ್ಣಿಸಿದರು.</p>.<p>ಜಾತಿಯ ಗೋಡೆ ಕಟ್ಟುತ್ತಿದ್ದವರನ್ನು ಕಂಡರೆ ಸದಾ ಸಿಡಿದೇಳುತ್ತಿದ್ದ ಪಟ್ಟಾಭಿರಾಮ ಅವರು ಗಾಂಧಿ ಜಯಂತಿ ಕಾರ್ಯಕ್ರಮವನ್ನು ಕೈಯಿಂದ ಹಣ ಹಾಕಿ ಹಮ್ಮಿಕೊಳ್ಳುತ್ತಿದ್ದರು. ಸಾಯುವ ತನಕ ಅವರು ತಮ್ಮ ಬುದ್ಧಿಯನ್ನು ಭ್ರಷ್ಟವಾಗಲು ಬಿಟ್ಟಿಲ್ಲ ಎಂದು ಪ್ರತಿಪಾದಿಸಿದರು.</p>.<p>ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಲಕ್ಷ್ಮಿನಾರಾಯಣ ಕಾರಂತ ಮಾತನಾಡಿ, ಪಟ್ಟಾಭಿರಾಮ ಅವರಿಗೂ ಎಂಜಿಎಂ ಕಾಲೇಜಿಗೂ ಅವಿನಾಭಾವ ಸಂಬಂಧವಿದೆ. ಅವರು ಇಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದರು ಎಂದು ಹೇಳಿದರು. ಅವರ ನೆನಪಿಗಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದೂ ತಿಳಿಸಿದರು.</p>.<p>ಮೀನಾ ಮೈಸೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗನಾಥ ಹೊಸೂರು ಉಪಸ್ಥಿತರಿದ್ದರು. ಹಯವದನ ಮೂಡುಸಗ್ರಿ ವಂದಿಸಿದರು. ಶಿವಸ್ವಾಮಿ ರಂಗಗೀತೆ ಹಾಡಿದರು.</p>.<div><blockquote>ಪಟ್ಟಾಭಿರಾಮ ಸೋಮಯಾಜಿ ಅವರ ಕವನಗಳಲ್ಲಿ ಬರುವ ವಿಡಂಬನೆಯ ಹಿಂದೆ ವಿಮರ್ಶನಾತ್ಮಕ ದೃಷ್ಟಿಕೋನವೂ ಇದೆ. ಅಲ್ಲಿ ವ್ಯಾಕರಣ ಮುಖ್ಯವಾಗಲ್ಲ. ಪ್ರಾಸದ ಹಂಗೂ ಇಲ್ಲ </blockquote><span class="attribution">ಕಮಲಾಕರ ಕಡವೆ ಅನುವಾದಕ ಲೇಖಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ:</strong> ಅನೀತಿ ಕಂಡರೆ ಸಿಡಿದೆದ್ದು ಪ್ರತಿಭಟಿಸುತ್ತಿದ್ದ ಪಟ್ಟಾಭಿರಾಮ ಸೋಮಯಾಜಿ ಅವರು ಏಕಾಂಗಿಯಾಗಿಯೇ ಸಾಮಾಜಿಕ ಜವಾಬ್ದಾರಿಯನ್ನು ಹೆಗಲಲ್ಲಿ ಹೊತ್ತುಕೊಳ್ಳುತ್ತಿದ್ದರು ಎಂದು ಸಾಹಿತಿ ಚ.ಸರ್ವಮಂಗಳ ಹೇಳಿದರು.</p>.<p>ಅಪರಾಜಿತೆ ಪ್ರಕಾಶನ ಮೈಸೂರು ಹಾಗೂ ಪಟ್ಟಾಭಿರಾಮ ಸೋಮಯಾಜಿ ಅವರ ಸ್ನೇಹಿತರ ಬಳಗದ ಸಹಯೋಗದಲ್ಲಿ ನಗರದ ಎಂಜಿಎಂ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪಟ್ಟಾಭಿರಾಮ ಸೋಮಯಾಜಿ ಅವರ ಕವನ ಸಂಕಲನ ‘ಆ್ಯನ್ ಆಲ್ಫಾಬೆಟಿಕಲ್ ಆಲ್ಟರ್ಕೇಶನ್’ ಬಿಡುಗಡೆ ಹಾಗೂ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಅನೀತಿಯ ವಿರುದ್ಧ ಹೋರಾಡಿದ್ದಕ್ಕೆ ಅವರನ್ನು ನಕ್ಸಲ್, ಅರ್ಬನ್ ನಕ್ಸಲ್ ಎಂದು ಕರೆದರು. ಸದಾ ಹಿಂಸೆಯನ್ನು ವಿರೋಧಿಸುತ್ತಿದ್ದ ಅವರು ನಕ್ಸಲ್ ಆಗಲು ಸಾಧ್ಯವಿಲ್ಲ ಎಂದರು.</p>.<p>ಪಟ್ಟಾಭಿರಾಮ ಅವರು ಎಲ್ಲರ ಜೊತೆ ಸೈದ್ಧಾಂತಿಕವಾಗಿ ಹತ್ತಿರವಾಗುತ್ತಿದ್ದರು. ಆದರೆ ಇಸಂಗಳು, ಜಾತಿ ಪರ ಒಲವು ಇರುವವರು ಬಂದಾಗ ಅವರಿಂದ ದೂರವಿರುತ್ತಿದ್ದರು ಮತ್ತು ಸದಾ ಒಳಮುಖವಾಗಿಯೇ ಇರುತ್ತಿದ್ದರು ಎಂದು ಹೇಳಿದರು.</p>.<p>ಎಲ್ಲೆಲ್ಲಿ ಆಡಳಿತದ ಕಪಿಮುಷ್ಟಿ ಇತ್ತೊ ಅಲ್ಲಿ ಪಟ್ಟಾಭಿರಾಮ ಅವರು ನಾಗರ ಹಾವಿನಂತೆ ಬುಸ್, ಬುಸ್ ಎನ್ನುತ್ತಿದ್ದರು. ಆದರೆ ಯಾರಿಗೂ ಕೆಡುಕು ಮಾಡಿದ ವ್ಯಕ್ತಿಯಲ್ಲ ಎಂದು ಬಣ್ಣಿಸಿದರು.</p>.<p>ಜಾತಿಯ ಗೋಡೆ ಕಟ್ಟುತ್ತಿದ್ದವರನ್ನು ಕಂಡರೆ ಸದಾ ಸಿಡಿದೇಳುತ್ತಿದ್ದ ಪಟ್ಟಾಭಿರಾಮ ಅವರು ಗಾಂಧಿ ಜಯಂತಿ ಕಾರ್ಯಕ್ರಮವನ್ನು ಕೈಯಿಂದ ಹಣ ಹಾಕಿ ಹಮ್ಮಿಕೊಳ್ಳುತ್ತಿದ್ದರು. ಸಾಯುವ ತನಕ ಅವರು ತಮ್ಮ ಬುದ್ಧಿಯನ್ನು ಭ್ರಷ್ಟವಾಗಲು ಬಿಟ್ಟಿಲ್ಲ ಎಂದು ಪ್ರತಿಪಾದಿಸಿದರು.</p>.<p>ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಲಕ್ಷ್ಮಿನಾರಾಯಣ ಕಾರಂತ ಮಾತನಾಡಿ, ಪಟ್ಟಾಭಿರಾಮ ಅವರಿಗೂ ಎಂಜಿಎಂ ಕಾಲೇಜಿಗೂ ಅವಿನಾಭಾವ ಸಂಬಂಧವಿದೆ. ಅವರು ಇಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದರು ಎಂದು ಹೇಳಿದರು. ಅವರ ನೆನಪಿಗಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದೂ ತಿಳಿಸಿದರು.</p>.<p>ಮೀನಾ ಮೈಸೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗನಾಥ ಹೊಸೂರು ಉಪಸ್ಥಿತರಿದ್ದರು. ಹಯವದನ ಮೂಡುಸಗ್ರಿ ವಂದಿಸಿದರು. ಶಿವಸ್ವಾಮಿ ರಂಗಗೀತೆ ಹಾಡಿದರು.</p>.<div><blockquote>ಪಟ್ಟಾಭಿರಾಮ ಸೋಮಯಾಜಿ ಅವರ ಕವನಗಳಲ್ಲಿ ಬರುವ ವಿಡಂಬನೆಯ ಹಿಂದೆ ವಿಮರ್ಶನಾತ್ಮಕ ದೃಷ್ಟಿಕೋನವೂ ಇದೆ. ಅಲ್ಲಿ ವ್ಯಾಕರಣ ಮುಖ್ಯವಾಗಲ್ಲ. ಪ್ರಾಸದ ಹಂಗೂ ಇಲ್ಲ </blockquote><span class="attribution">ಕಮಲಾಕರ ಕಡವೆ ಅನುವಾದಕ ಲೇಖಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>