ಪ್ರೊ.ಟಿ.ಮುರುಗೇಶಿ ಮಾತನಾಡಿ, ಉದ್ಯಾವರವು ನಂದಿವಾಹನ ನಂದಿತೆ, ಗರುಡ ವಾಹಿನಿ ಗಾರುಡಿಗೆ, ಹಂಸವಾಹಿನಿ ಹಂಸಿತೆ, ಮಹಾಕಾಳಿ, ಪಂಜುರ್ಲಿ ಮುಂತಾದ ಸಿರಿದೈವಗಳ ಆರಾಧನೆಯ ತಾಣವಾಗಿದೆ. ಇಲ್ಲಿನ ನಾಲ್ಕು ಸಿರಿಗಳು ಮಣ್ಣಿನ ಮೂರ್ತಿಗಳಾಗಿದ್ದು, ಪ್ರಾಚೀನತೆಗೆ ಸಾಕ್ಷಿಯಾಗಿವೆ. ನಂದಳಿಕೆಯ ಸಿರಿದೈವಗಳ ಉಲ್ಲೇಖವಿರುವ ಶಾಸನವೂ ಇಲ್ಲಿದೆ. ವಿಜಯ ನಗರದ ಕಾಲದಲ್ಲಿ ಜನಪದ ದೈವಸ್ಥಾನವನ್ನು ವೀರಭದ್ರನ ಪ್ರತಿಷ್ಠೆಯೊಂದಿಗೆ ದೇವಾಲಯವಾಗಿ ಪರಿವರ್ತಿಸಲಾಯಿತು ಎಂದು ಹೇಳಿದರು.