ಉಡುಪಿ: ಹೆಬ್ರಿಯ ಬೆಳ್ವೆ ಸಮೀಪದ ಗುಮ್ಮಲ ಸುರ್ಗೋಳಿ ಬಳಿ ಬುಧವಾರ ರಾತ್ರಿ ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಕೊಲೆ ಮಾಡಿ ಪತಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸೂರಿ ಹಲಸೆ (52) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಪತ್ನಿ ಮಾನಸ ಹಾಗೂ ಮಕ್ಕಳಾದ ಸುಧೀಂದ್ರ ಹಾಗೂ ಸುದೇಶ್ ಕೊಲೆಯಾದವರು. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಶಂಕರ ನಾರಾಯಣ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ತನಿಖೆ ನಡೆಸುತ್ತಿದ್ದಾರೆ.