ಉಡುಪಿ: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಕಚೇರಿ ಯಲ್ಲಿ ಭಾನುವಾರ ನಡೆದ ಮಹಾಸಭೆ ಯಲ್ಲಿ ಒಕ್ಕೂಟದ ನೂತನ ಅಧ್ಯಕ್ಷರಾಗಿ ಯು.ಕೆ.ಎಸ್. ಸೀತಾರಾಮ್ ಆಚಾರ್ಯ ಅವರು ಅಧಿಕಾರ ಸ್ವೀಕರಿಸಿದರು. ನಿರ್ಗ ಮನ ಅಧ್ಯಕ್ಷ ಅಲೆವೂರು ಯೋಗೇಶ್ ಆಚಾರ್ಯ ಅಧಿಕಾರ ಹಸ್ತಾಂತರಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತ ನಾಡಿದ ನೂತನ ಅಧ್ಯಕ್ಷರು, ಸಮಾಜದ ಸಂಘ ಸಂಸ್ಥೆಗಳು, ದೇವಸ್ಥಾನಗಳು ಮತ್ತು ಗುರುಪೀಠ ಸಾಮರಸ್ಯದಿಂದ ಕಾರ್ಯ ನಿರ್ವಹಿಸುವಂತೆ ಪ್ರಯತ್ನಿಸ ಲಾಗುವುದು ಎಂದರು.
ಉಪಾಧ್ಯಕ್ಷ ಮಧು ಆಚಾರ್ಯ ಮಾತನಾಡಿ, ಒಕ್ಕೂಟವನ್ನು ದ.ಕ. ಜಿಲ್ಲೆ ಯಲ್ಲಿ ಸಮಾಜಮುಖಿ ಕಾರ್ಯಕ್ರಮದ ಮೂಲಕ ಜನಪ್ರಿಯಗೊಳಿಸಬೇಕು ಎಂ ದು ಹೇಳಿದರು.ನಿರ್ಗಮನ ಪ್ರಧಾನ ಕಾರ್ಯದರ್ಶಿ ಬಿಳಿಯಾರು ಗಣಪತಿ ಆಚಾರ್ಯ ಅವರು ನೂತನ ಪ್ರಧಾನ ಕಾರ್ಯದರ್ಶಿ ಬಿ.ಜಿ. ರಮೇಶ್ ಆಚಾರ್ಯ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.
ಬಿ.ಎ. ಆಚಾ ರ್ಯ ಮಣಿಪಾಲ, ನಾಲ್ಕಾ ಗೋಪಾಲ ಕೃಷ್ಣ ಆಚಾರ್ಯ, ಕರಂಬಳ್ಳಿ ವಿಶ್ವನಾಥ ಆಚಾರ್ಯ, ಕಡೆಕಾರ್ ಶ್ರೀನಿವಾಸ್ ಆಚಾರ್ಯ, ಕೆ. ಮುರಳೀಧರ್, ಶ್ರೀಧರ್ ಪುರೋಹಿತ್ ಶುಭ ಹಾರೈಸಿದರು. ಗಣಪತಿ ಆಚಾರ್ಯ ವಂದಿಸಿದರು.