ಪ್ರಾಂಶುಪಾಲ ಡಾ. ಶ್ರೀಕಾಂತ್ ಮಾತನಾಡಿ, ಶುಶ್ರೂಷಕರಿಲ್ಲದಿದ್ದರೆ ರೋಗಿಗಳ ಪರಿಸ್ಥಿತಿ ಹೇಗಿರುತ್ತದೆ ಎಂದು ಊಹಿಸಿಕೊಂಡರೆ ಭಯ ವಾಗುತ್ತದೆ. ಈ ವೃತ್ತಿಯನ್ನು ಸೇವಾಮನೋಭಾವದಿಂದ ಆಯ್ಕೆ ಮಾಡಿಕೊಳ್ಳಬೇಕು.
ಆಸ್ಪತ್ರೆಗೆ ಬರುವ ರೋಗಿಗಳು ಮಾನಸಿಕ ಮತ್ತು ದೈಹಿಕವಾಗಿ ಬಳಲಿರುತ್ತಾರೆ. ಅವರನ್ನು ಕರುಣೆ, ಪ್ರೀತಿ ಮತ್ತು ವಿಶ್ವಾಸದಿಂದ ಕಂಡು ಉಪ ಚರಿಸಬೇಕು. ಅದೇ ಅವರಿಗೆ ಸಂಜೀವಿನಿಯಾಗಲಿದೆ. ಇದರಿಂದ ಅವರು ಬಹುಬೇಗ ಗುಣಮುಖರಾಗುತ್ತಾರೆ. ಅಂತಯೇ ಸಾರ್ವಜನಿಕರು ಶೂಶ್ರುಷಕೀಯರ ಜತೆ ಗೌರವದಿಂದ ವರ್ತಿಸಬೇಕು ಎಂದರು.