ಪ್ರಜಾಕೀಯ ಅಭ್ಯರ್ಥಿಗೆ ಸಂಬಳ ನೀಡುವ ಪದ್ಧತಿ ಜಾರಿಗೆ ತಂದಿದ್ದೇವೆ. ಹಣ ಹಾಕಿ ಹಣ ತೆಗೆಯುವುದು ರಾಜಕೀಯ. ಉತ್ತಮ ಆರೋಗ, ಶಿಕ್ಷಣ ಬೇಕು ಎಂದರೆ ಪ್ರಜಾಕೀಯಬೇಕು. ಶ್ರಮ, ಬುದ್ಧಿವಂತಿಕೆ, ಕಾರ್ಯಕ್ಷಮತೆ ಸೇರಿದರೆ ಅದ್ಭುತ ಸಾಧನೆ ಮಾಡಬಹುದು. ಹಾಗಾಗಿ, ನಮ್ಮ ಪಕ್ಷದ ಅಭ್ಯರ್ಥಿ ವೆಂಕಟೇಶ್ ಅವರನ್ನು ಜನರು ಗೆಲ್ಲಿಸಬೇಕು. ಸಾಮಾಜಿಕ ಜಾಲತಾಣ, ಮಾಧ್ಯಮಗಳ ಮೂಲಕ ಪ್ರಚಾರ ನಡೆಸಲಾಗುವುದು ಎಂದರು.