2017 ಮಾರ್ಚ್ 2ರಂದು ಅಪಘಾತ ನಡೆದಿತ್ತು. ರಮ್ಜಾನಸಾಬ ದಸ್ತಗಿರಿಸಾಬ ಸೈಯದ್ ಖಾನ್ ಚಲಾಯಿಸುತ್ತಿದ್ದ ಬಸ್ ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದು ಸದಾಶಿವ ಖೋತ ಮೃತಪಟ್ಟಿದ್ದರು. ನಾಮದೇವ ಸೋಗಲೆ ಹಾಗೂ ಪಾಂಡುರಂಗ ಕಳಕರ ಎಂಬುವರು ಗಾಯಗೊಂಡಿದ್ದರು. ಅಂದಿನ ಪಿಐ ವಿಜಯ್ ಬಿರಾದಾರ ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.