ಗಂಗಾವಳಿ ನದಿ ತಟದಲ್ಲಿ ಪ್ರವಾಹಕ್ಕೆ ಸಿಲುಕಿರುವ ಹೆಗ್ಗಾರ, ಕಲ್ಲೇಶ್ವರ ಭಾಗದ ಅಡಿಕೆ ತೋಟ, ಸಾಗುವಳಿ ಭೂಮಿಯಲ್ಲಿ ಒಂದೂವರೆಯಿಂದ ಮೂರು ಅಡಿಯಷ್ಟು ಮರಳು ಶೇಖರಣೆಯಾಗಿದೆ. ತೋಟದಲ್ಲಿ ಮನೆ ಕಟ್ಟಿಕೊಂಡಿದ್ದ ಹಲವರ ಮನೆಯೊಳಗೆ ನೀರು ಹೊಕ್ಕಿದ್ದರೆ, ಇನ್ನು ಕೆಲವರ ಮನೆಗಳು ನೀರಿನ ಸೆಳವಿಗೆ ಕುಸಿದು ಬಿದ್ದಿವೆ. ನೆರೆ ಇಳಿದ ಮೇಲೆ ಎಲ್ಲರೂ ಅವರ ಮನೆಗಳ ಸ್ಥಿತಿಯನ್ನು ಕಂಡು ಮರುಗಿದ್ದಾರೆ.