ಪ್ರಹ್ಲಾದ್ ಜೋಶಿ ಮಾತನಾಡಿ, ‘ನನೆಗುದಿಗೆ ಬಿದ್ದಿರುವ ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗ ನಿರ್ಮಾಣಗೊಂಡು, ಸಂಚಾರ ಪ್ರಾರಂಭವಾದರೆ ಉತ್ತರ ಕರ್ನಾಟಕದ ಅಭಿವೃದ್ಧಿಯ ಬಾಗಿಲು ತೆರೆದಂತಾಗುತ್ತದೆ. ಸಮಸ್ಯೆ ನಮ್ಮ ಕೈಯಲ್ಲಿದ್ದರೆ, ಎಂದೋ ಅದನ್ನು ಬಗೆಹರಿಸಿಬಿಡುತ್ತಿದ್ದೆವು. ನಿಮ್ಮವರೇ ಬಹಳ ಕಾಲದಿಂದ ಕೋರ್ಟ್, ಕಚೇರಿಗೆ ಈ ಪ್ರಕರಣವನ್ನು ಒಯ್ದ ಕಾರಣ ರೈಲು ಮಾರ್ಗ ನಿರ್ಮಾಣವಾಗಿಲ್ಲ. ಈಗಲೂ ಅವಕಾಶ ಕೂಡಿ ಬಂದರೆ ಆದಷ್ಟು ಶೀಘ್ರ ಈ ಮಾರ್ಗ ನಿರ್ಮಾಣ ಮಾಡಲಾಗುವುದು’ ಎಂದು ಭರವಸೆ ನೀಡಿದರು.