ಮುಂಡಗೋಡ-ಅಣಶಿ ರಾಜ್ಯ ಹೆದ್ದಾರಿಯ 46ರಲ್ಲಿ ಈ ಅಮ್ಮಾಜಿ ಕೆರೆಯಿದೆ. ಆದರೆ ಕೆರೆಯ ದಡದ ಮೇಲಿನ ರಸ್ತೆ ತಿರುವುಮುರುವುಗಳಿಂದ ಕೂಡಿದ್ದು, ಪ್ರಯಾಣಿಕರಿಗೆ ಕೆಲವೊಮ್ಮೆ ದಾರಿತಪ್ಪಿಸುತ್ತದೆ. ರಸ್ತೆಗೆ ತಾಗಿಯೇ ಇರುವ ಕೆರೆಯ ದಡದ ಮೇಲೆ ಯಾವುದೇ ಅಡೆತಡೆಗಳಿಲ್ಲ. ಇದರಿಂದ ಚಾಲಕನ ನಿಯಂತ್ರಣ ತಪ್ಪಿದರೇ, ವಾಹನಗಳು ನೇರವಾಗಿ ಕೆರೆಗೆ ಹೋಗುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಅಪಾಯಕಾರಿ ರಸ್ತೆಯ ಪಕ್ಕ, ಕೆರೆಯ ದಡದ ಮೇಲೆ ಕ್ರ್ಯಾಶ್ ಬಾರಿಯರ್ ಅಳವಡಿಸಬೇಕು ಎಂದು ಪ್ರಯಾಣಿಕರು ಆಗ್ರಹಿಸುತ್ತಿದ್ದಾರೆ.