ವಾಹನದ ಚಾಲಕ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಹುಮಾಯಿನ್ ಅಲ್ಲಾಭಕ್ಷ್ ಪಟೇಲ್ (38), ಉತ್ತರಪ್ರದೇಶದ ಕೂಲಿ ಕೆಲಸಗಾರರಾದ ಜರೀಫ್ ಅಬ್ದುಲ್ ಮಜೀದ್ (44) ಹಾಗೂ ನವೀ ಮಹ್ಮದ್ ಅಸಗರ ಅಲಿ (35) ಬಂಧಿತರು. 15 ಎಮ್ಮೆಗಳನ್ನು ಬೆಳಗಾವಿ ಜಿಲ್ಲೆ ಯರಗಟ್ಟಿಯಿಂದ ಸಾಗಿಸುತ್ತಿದ್ದರು ಎನ್ನಲಾಗಿದೆ. ಪೊಲೀಸರು ಲಾರಿಯನ್ನು ತಡೆದು ಪರಿಶೀಲಿಸಿದಾಗ ಅಕ್ರಮ ಜಾನುವಾರು ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದ್ದು ಎಮ್ಮೆಗಳನ್ನು ಗೋಶಾಲೆಗೆ ರವಾನಿಸಲಾಗಿದೆ ಎಂದು ಪೊಲೀಸ್ ನಿರೀಕ್ಷಕ ಸುರೇಶ ಯಳ್ಳೂರು ತಿಳಿಸಿದ್ದಾರೆ.