ಶಿಕ್ಷಣ ತಜ್ಞ ಮುರಳೀಧರ ಪ್ರಭು ಮಾತನಾಡಿ, ‘ಇತಿಹಾಸ ಬರೆಯಲು ಸಾಕಷ್ಟು ಅಧ್ಯಯನ ಬೇಕು. ಆಳವಾಗಿ ಅಭ್ಯಾಸ ಮಾಡಿದಾಗ ನಿಖರವಾಗಿ ಬರೆಯಲು ಸಾಧ್ಯ. ನಾಗೇಶ ಸೋಂದೆ ನಿರಂತರ ಸಂಶೋಧನೆ ಮೂಲಕ ಅನುಭವವನ್ನು ದಾಖಲಿಸಿದ್ದಾರೆ’ ಎಂದರು.
ಹಿರಿಯ ಸಹಕಾರಿ ವಿ.ಎಸ್.ಸೋಂದೆ ಅಧ್ಯಕ್ಷತೆ ವಹಿಸಿದ್ದರು. ಭದ್ರಾವತಿಯ ವೈದ್ಯ ನರೇಂದ್ರ ಭಟ್ಟ, ಪ್ರಮುಖರಾದ ಗಜಾನನ ಪಾಲೇಕರ ಅಗಡಿ, ಸುನಿಲ್ ಗಾಯತೊಂಡೆ, ಜಯವೀರ ಇಸಳೂರ, ಶಂಕರ ದಿವೇಕರ, ಸುಧಾಕರ ಕಾಮತ, ಪಾಂಡುರಂಗ ಪೈ, ಅಶೋಕ ಪೈ ಇದ್ದರು. ಮಹಾವಿಷ್ಣು ದೇವಾಲಯದ ಮೊಕ್ತೇಸರ ವಿಷ್ಣುದಾಸ ಕಾಸರಕೋಡ ಸ್ವಾಗತಿಸಿದರು. ವಾಸುದೇವ ಶಾನಭಾಗ ನಿರೂಪಿಸಿದರು. ಎಂ.ಎಸ್.ಪ್ರಭು ವಂದಿಸಿದರು.